ರೈತ ಕಣ್ಣಿಗೆ ಕಂಡರೆ ಕೈಯೆತ್ತಿ ಮುಗಿಯ ಬೇಕು – ಶ್ರೀ ಚಂದ್ರಕಾಂತ ಪ್ಯಾಠಿ ಅಭಿಮತ.

ಕಲಕೇರಿ ಮಾರ್ಚ್.25

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಶೇಷ ಉಪನ್ಯಾಸ ಕೈಷ ಋಷ ಮಹಾ ಶಿವಾಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಹಾಪುರಾಣ ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ.ಸಿದ್ದರಾಮ ಶಿವಾಚಾರ್ಯರು ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ. ಶ್ರೀ ಷ.ಬ್ರ.ಜಡಿಸಿದ್ದೇಶ್ವರ ಶಿವಾಚಾರ್ಯರು ಜಡಿಮಠ ದೇವರ ಹಿಪ್ಪರಗಿ. ಪ.ಪೂ.ಶ್ರೀಸೋಮಲಿಂಗ ಸ್ವಾವಿುಗಳು ಲಂಬಾಣಿ ಗುರು ಪೀಠ ಕಸದಟ್ಟಿ. ವಿಶೇಷ ಉಪನ್ಯಾಸಕರುಶ್ರೀ ಚಂದ್ರಕಾಂತ ಪ್ಯಾಠಿ ಪ್ರಗತಿಪರ ರೈತರು.ವಿಜಯಪುರ ಇವರು ರೈತ ಈ ದೇಶದ ಬೆನ್ನೆಲುಬು ನೀವೆಲ್ಲ ತಿನ್ನುವ ಅನ್ನ ಆ ರೈತ ಬೆಳೆದ ಅನ್ನ ಎಂಬುದು ಮರಿಬೇಡಿ ಯಾವುದೇ ರೈತ ಕಣ್ಣಿಗೆ ಕಂಡರೆ ಕೈಯೆತ್ತಿ ಮುಗಿಯಬೇಕು.

ಆ ರೈತರಿಗೆ ಆ ರೈತನ ತಾಯಿ ತಂದೆ ಯಾರು ಅಂತ ನಿಮಗಿನ್ನೂ ತಿಳಿಸುತ್ತೇನೆ ರೈತನ ತಾಯಿ ಭೂಮಿತಾಯಿ ರೈತನ ತಂದೆ ಮೇಘರಾಜ ಇದೇ ನಿಜ ಸಂಗತಿ ಒಬ್ಬ ನೌಕರಿ ಮಾಡವ ಲಕ್ಷಾನ್ಗಟ್ಲೆ ದುಡ್ಡು ಇರುತ್ತೆ ದುಡ್ಡು ತಿನ್ನಾಕ್ ಬರಲ್ಲ ಅದೇ ರೈತ ಹೊಲದಾಗಿನ ಜ್ವಾಳ ತಂದಾಗ ಜೋಳ ಬೀಸಿಕೊಂಡು ಬಂದು ಹತ್ತು ಜನ ತಿನ್ನುತ್ತಾರೆ ಶ್ರೀಮಂತರ ಮನೆಯಲ್ಲಿ ಚಿನ್ನದ ಗಂಗಾಳ ಇದ್ದರೆ ಅದರಲ್ಲಿ ರೈತ ಬೆಳೆದಂತ ಅನ್ನವನ್ನೇ ತಿನ್ನಬೇಕು ದುಡ್ಡು ತಿನ್ನಕ್ಕಾಗಲ್ಲ ಈ ಸಂದರ್ಭದಲ್ಲಿ ಹಿರಿಯ ರೈತರ ಬಹಳ ಚೆನ್ನಾಗಿ ರೈತರಿಗೆ ಎಲ್ಲಾ ಹಿರಿಯರಿಗೆ ಸಾರ್ವಜನಿಕರಿಗೆ ತಿಳಿಸಿದರು. ಇಂದು ಕಲಕೇರಿ ಹಿರೇಮಠದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಈ ಸಂಘಟನೆ ವತಿಯಿಂದ ತಾಳಿಕೋಟಿ ತಾಲೂಕ್ ಕಲಕೇರಿ ಮಹಿಳಾ ಸಂಘಟನೆ ಉದ್ಘಾಟನಾ ಸಮಾರಂಭ ಕಲಕೇರಿ ಹಿರೇಮಠದ ಪೂಜ್ಯರಿಂದ ರೈತ ಸಂಘ ಮಹಿಳೆಯರಿಗೆ ಸನ್ಮಾನ ಮಾಡಿದರು ತಾಳಿಕೋಟಿ ತಾಲೂಕ ಅಧ್ಯಕ್ಷರು ಶ್ರೀಮತಿ ಸುಜಾತ ಅವಟಿ. ಗೌರವ ಅಧ್ಯಕ್ಷರು ವಿಮಲಾ ಹಿರೇಮಠ. ಶ್ರೀಮತಿ ಪೂಜಾ ಬಡಿಗೇರ. ಶ್ರೀದೇವಿ ಹಿರೇಮಠ. ಶ್ರೀಮತಿ ಬಸಮ್ಮ ಚಳ್ಳಗಿ.ಶ್ರೀಮತಿ ಶಾಂತಮ್ಮ ಹಿರೇಮಠ. ಶ್ರೀಮತಿ ಕಾಶಿಬಾಯಿ ಬಡಿಗೇರ. ಶ್ರೀಮತಿ ವಿಜಯಲಕ್ಷ್ಮಿ ಬಡಿಗೇರ. ಶ್ರೀಮತಿ ಲಕ್ಷ್ಮಿ ಬಡಿಗೇರ. ಶ್ರೀಮತಿ ಸುನಿತಾ ಬಡಿಗೇರ. ಶ್ರೀಮತಿ ಶಶಿಕಲಾ ಬಡಿಗೇರ. ಶ್ರೀಮತಿ ಕಸ್ತೂರಿಬಾಯಿ ಬಡಿಗೇರ. ಈ ರೈತ ಸಂಘದ ಪದಾಧಿಕಾರಿಗಳು ಆಯ್ಕೆಯಾದರು. ವಿಜಯಪುರ ಜಿಲ್ಲಾ ಅಧ್ಯಕ್ಷರು ಸಂಗಮೇಶ ಸಾಗರ. ತಾಳಿಕೋಟಿ ತಾಲೂಕಿನ ಅಧ್ಯಕ್ಷರು ಶ್ರೀಶೈಲ ವಾಲಿಕಾರ. ಕಲಕೇರಿ ಹೋಬಳಿ ಅಧ್ಯಕ್ಷರು ಮೈಬೂಬಬಾಷ ಮನಗೂಳಿ. ಇವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಆಯ್ಕೆ ನೆರವೇರಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button