ಬಳಲಿದ ಗಿಡಗಳಿಗೆ ತಾನೆ ನಿಂತು ನೀರು ಹಾಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ.
ಸಿದ್ದಾಪುರ ಮಾರ್ಚ್.25

ಹೇಳಿ ಕೇಳಿ ಬೇಸಿಗೆ ಕಾಲ ಅನುಕೂಲಸ್ಥ ವಿವೇಕಿ ಮನುಷ್ಯರೆ ಸುಡು ಬಿಸಿಲಿಗೆ ಬಸವಳಿದು ಪದೇ ಪದೇ ನೀರು ಕುಡಿದು ಸಮಾಧಾನ ಪಟ್ಟುಕೊಳ್ಳುವ ಸನ್ನಿವೇಶಗಳು ಈಗ ಸಾಮಾನ್ಯ. ಆದರೆ ಮೂಕ ಜೀವಿಗಳ ದಾಹದ ಅಳಲ್ಲನ್ನು ಯಾರೂ ಕೇಳಬೇಕು..? ಒಂದಿಷ್ಟು ವನ್ಯಜೀವಿ ಪ್ರೇಮಿಗಳು ತಮ್ಮ ಮನೆಯ ಟೇರಸ್ ಮೇಲೆ ನೀರಿನ ತಟ್ಟೆಗಳನ್ನು ಇಟ್ಟು ತಮ್ಮದೇ ಆದ ಸೇವೆ ಮೆರೆಯುತ್ತಿರುವುದು ಕಾಣುತ್ತಿರುವುದು ಮೆಚ್ಚುಗೆಯಾಗುತ್ತಿದೆ. ಹಾಗೆಯೇ ಮೂಕ ಜೀವಿಗಳಂತೆ ಜೀವ ಸಂವೇದನೆಯುಳ್ಳ ಬೆಳೆಯುವ ಗಿಡ ಮರಗಳು ಯಾರನ್ನು ಕೇಳಬೇಕು ಅಲ್ಲವೇ? ಮನುಷ್ಯರಿಗಾಗಿ ತಾನು ಸುಡು ಬಿಸಿಲೊದ್ದು ತನ್ನ ನೆರಳನ್ನು ಉದಾರವಾಗಿ ಕೊಡುವಂತಹ ಮರಗಳ ಸೇವಾ ಮಹತ್ವವನ್ನು ವಿದ್ಯವಂತ ರಾದವರು ಕೃತಜ್ಞತೆ ಅರ್ಥೈಸಿ ಕೊಳ್ಳಬೇಕು.ಅಷ್ಟೇ ಅಲ್ಲ ಗಿಡ ಮರಗಳ ರಕ್ಷಣೆಗೆ ತಮ್ಮಿಂದಾಗುವಂತ ಸೇವಾ ಕಾರ್ಯವನ್ನು ನಮಗೆ ನಾವೇ ಅರಿತು ಮಾಡಬೇಕಿದೆ. ಇಂತಹ ದೊಂದು ಉನ್ನತವಾದ ಸೇವಾ ಕಾರ್ಯಕ್ಕಾಗಿ ಎಂ. ರಾಮಚಂದ್ರಪ್ಪ ಮುಂದಾಗಿದ್ದು ಸ್ವಾಗತಾರ್ಹ.ಚಳ್ಳಕೆರೆ ತಾಲೂಕಾ ನಗರಂಗೆರೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಇವರು, ಸಿದ್ಧಾಪುರದ ಭೂತಪ್ಪನ ಗುಡಿ ಮುಂದೆ ಪರಿಸರ ಸ್ನೇಹಿ ಗೆಳೆಯರು ನೆಟ್ಟ ನೂರಾರು ಗಿಡಗಳಿಗೆ ಮೂರು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದಾರೆ. ಹಾಗೆ ಗಿಡಗಳ ಪೋಷಕರಾದ ಸಿದ್ಧಾಪುರದ ಎಸ್.ಕೆಂಚಪ್ಪ,ಟಿ.ಓಬಳೇಶ್ ಅವರೊಂದಿಗೆ ತಾನೇ ನಿಂತು ಗಿಡಗಳ ಪಾತಿಗೆ ನೀರು ತುಂಬಿಸಿದ್ದಾರೆ. ಈ ಮೂಲಕ ತುಂಬು ಸಹಕಾರ ನೀಡಿ ಪರಿಸರ ಸ್ನೇಹಿ ಗೆಳೆಯರಾದ ಕೆಂಚಪ್ಪಓಬಳೇಶ್ ಗೆ ಈ ಗಿಡಗಳನ್ನು ಪೋಷಿಸಲು ಗ್ರಾ.ಪಂ. ಮೂಲಕ ನೆರವು ನೀಡಲಾಗುವುದೆಂದು ಪಿಡಿಓ ರಾಮಚಂದ್ರಪ್ಪ ಭರವಸೆ ನೀಡಿದ್ದಾರೆ. ಸುಡುಬಿಸಿಲಿಗೆ ನೀರಿಲ್ಲದೆ ಒಣಗಿದ್ದ ಗಿಡಗಳಿಗೆ ಇವರ ಸಹಕಾರ ದಿಂದ ಮತ್ತೆ ಜೀವ ಕಳೆ ತುಂಬಿ ಕೊಳ್ಳಲಿವೆ. ಇವರ ಈ ವಿಶೇಷ ಪರಿಸರ ಸೇವಾ ಕಳಕಳಿಯ ಬಗ್ಗೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ : ಕೋಡಿಹಳ್ಳಿ ಶಿವಮೂರ್ತಿ.ಟಿ ಚಳ್ಳಕೆರೆ