ಅದ್ದೂರಿಯಾಗಿ ನಡೆದ ಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ.
ನಾಯಕನಹಟ್ಟಿ ಮಾರ್ಚ್.26

ಕರ್ನಾಟಕದ ಪ್ರಮುಖ ಜಾತ್ರಾ ಮಹೋತ್ಸವ ಎಂದೇ ಗುರುತಿಸಿ ಕೊಂಡಿರುವ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಸಾಗಿದೆ.ಭೀಕರ ಬರದ ನಡುವೆಯೂ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸಮೃದ್ಧ, ಮಳೆ ಮತ್ತು ಬೆಳೆ ನೀಡಲೆಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬಳಿ ಪ್ರಾರ್ಥನೆ ಮಾಡಿದರು.ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆ ಯಾಗಿರುವ ಮುಕ್ತಿ ಭಾವುಟಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತದೆ. ಪ್ರತಿ ವರ್ಷವೂ ಮುಕ್ತಿ ಭಾವುಟವನ್ನು ಯಾರು, ಎಷ್ಟು ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಂಡರು ಎನ್ನುವುದು ಭಕ್ತರಲ್ಲಿ ಕುತೂಹಲ ಮೂಡಿಸುತ್ತದೆ.

ಅಂತೆಯೇ ಈ ವರ್ಷ ಅಂದರೆ 2024ರಲ್ಲಿ ನಡೆದ ಶ್ರೀ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಾತ್ರೆಯ ಮುಕ್ತಿ ಭಾವುಟ ಬರೋಬ್ಬರಿ 61 ಲಕ್ಷ ರೂ.ಗಳಿಗೆ ಹರಾಜಾಗಿದೆ.ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು 61 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದು ಕೊಂಡಿದ್ದಾರೆ.2022 ರಲ್ಲಿ ಚಳ್ಳಕೆರೆ ಎಪಿಎಂಸಿ ಅಧ್ಯಕರಾಗಿದ್ದ ಟಿ.ಪ್ರಕಾಶ್ 16 ಲಕ್ಷ ರೂ.ಗಳಿಗೆ, 2021 ರಲ್ಲಿ ನಾಯಕನಹಟ್ಟಿಯ ವಕೀಲ ಎಸ್.ಉಮಾಪತಿ 21 ಲಕ್ಷ ರೂ.ಗಳಿಗೆ ಪಡೆದು ಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮುಕ್ತಿ ಭಾವುಟ ಹರಾಜಿನ ನಂತರ ನಾಯಕನಹಟ್ಟಿಯ ತೇರು ಬೀದಿಯಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿಯ ಬೃಹತ್ ಗಾತ್ರದ ತೇರನ್ನು ಲಕ್ಷಾಂತರ ಭಕ್ತರು ಎಳೆದು ಪುನೀತರಾದರು.ಈ ವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮತ್ತಿತರರಿದ್ದರು.
ವರದಿ:ಕೋಡಿಹಳ್ಳಿ.ಶಿವಮೂರ್ತಿ.ಟಿ ಚಳ್ಳಕೆರೆ