ಶಾಂತಿಯುತವಾಗಿ ನಡೆದ ಎಸ್ಸೆಸ್ಸೆಲ್ಸಿ ಎರಡನೆಯ ದಿನದ ಸಮಾಜ ವಿಜ್ಞಾನ ಪರೀಕ್ಷೆ.
ಹುನಗುಂದ ಮಾರ್ಚ್.27

ಎಸ್.ಎಸ್.ಎಲ್.ಸಿ ಎರಡನೆಯ ದಿನದ ಸಮಾಜ ವಿಜ್ಞಾನ ಪರೀಕ್ಷೆ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ೧೪ ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಂತ ಶಾಂತಿಯುತವಾಗಿ ಜರುಗಿದವು.ಹುನಗುಂದ ತಾಲೂಕಿನ ೮ ಮತ್ತು ಇಳಕಲ್ಲ ತಾಲೂಕಿನ ಪೈಕಿ ೬ ಪರೀಕ್ಷೆ ಕೇಂದ್ರಗಳು ಸೇರಿದ್ದಂತೆ ಒಟ್ಟು ೧೪ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೫೧೪೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಿಸಿ ಕೊಂಡಿದ್ದರು. ೫೧೪೨ ವಿದ್ಯಾರ್ಥಿಗಳ ಪೈಕಿ ೩೯ ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು. ಒಟ್ಟು ೫೧೦೩ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ ಕಿಲ್ಲೇದಾರ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆಗೆ ಆಗಮಿಸಿದ್ದಂತೆ ಎರಡನೆಯ ಪರೀಕ್ಷೆಗೂ ಕೂಡಾ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಪರೀಕ್ಷೆ ಕೇಂದ್ರಕ್ಕೆ ಆಗಮಿಸಿ ಅವರ ಕೊಠಡಿಗೆ ಕಳಿಸುವುದರ ಜೊತೆಗೆ ಚನ್ನಾಗಿ ಪರೀಕ್ಷೆ ಬರೆಯುವಂತೆ ಶುಭ ಹಾರೈಸಿದರು.ಪರೀಕ್ಷೆಯ ಸಮಯಕ್ಕೆ ಅವರೆಲ್ಲರನ್ನು ಪೊಲೀಸ್ ಸಿಬ್ಬಂದಿ ಹೊರ ಹಾಕುವ ಮೂಲಕ ಅತ್ಯಂತ ಕಟ್ಟು ನಿಟ್ಟಿನಿಂದ ಪರೀಕ್ಷೆಯನ್ನು ನಡೆಸಲಾಯಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ