ಶ್ರೀ ಗಾನಯೋಗಿ ಸಂಗೀತ ಬಳಗದ ವತಿಯಿಂದ ಗುರುಗಳಿಗೆ ಆತ್ಮೀಯ ಸನ್ಮಾನ.

ಚಳ್ಳಕೆರೆ ಮಾರ್ಚ್.28

ಶ್ರೀ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ಶ್ರೀ ತೋಟಪ್ಪ ಉತ್ತಂಗಿ. ಎಂ ಅವರು ಕಲಾಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ರಾಯಚೂರು-ಜಿಲ್ಲೆ ಮಸ್ಕಿ -ತಾ, ಸುಕ್ಷೇತ್ರ ಇಳಕಲ್ ಮಠದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಶ್ರೀ ಗಾನಯೋಗಿ ಸಂಗೀತ ಬಳಗದ ಸದಸ್ಯ ಬಳಗದ ವತಿಯಿಂದ ಶ್ರೀಯುತ ಸನ್ಮಾನ್ಯ ತೋಟಪ್ಪ ಸರ್ ಅವರನ್ನು ಆತ್ಮೀಯವಾಗಿ ಶುಭಹಾರೈಸಿ ಗೌರವಿಸಿ ಅಭಿನಂದಿಸಲಾಯಿತು.ಗೌರವಾಧ್ಯಕ್ಷರಾದ ಗುರುಮೂರ್ತಿಯವರು, ಉಪಾಧ್ಯಕ್ಷರಾದ ಚಿನ್ಮಯಾನಂದ್ ಗುರುಗಳು, ಉಪಸಮಿತಿ ಅಧ್ಯಕ್ಷರಾದ ಸುಮಾರಾಜಶೇಖರ್, ಕಾರ್ಯದರ್ಶಿಗಳಾದ ಬಸವರಾಜ್ ಕಟ್ಟಿಯವರು, ನಂದೀಶ್ ಜಿ ಟಿ ಅವರು ಮತ್ತು ಸಂಗೀತ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ವರದಿ : ಶಿವಮೂರ್ತಿ.ಟಿ ಕೋಡಿಹಳ್ಳಿ, ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button