ಮಹಾರಾಜ ಮಠದಿಂದ ಹೀರೆಮಠದ ವರೆಗೆ ಮೂರ್ತಿಗಳ ಕುಂಭಮೇಳ ಬಾಜಾ ಭಜಂತ್ರಿಯಿಂದ ಅದ್ದೂರಿ ಮೆರವಣಿಗೆ ಜರುಗಿತು.

ಕಲಕೇರಿ ಮಾರ್ಚ್.31

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಹಿರೇಮಠದಲ್ಲಿ ಅದ್ದೂರಿ ಕಾರ್ಯಕ್ರಮಗಳು ಮತ್ತು ಎಲ್ಲಪ್ಪ ಮಹಾರಾಜ್ ಮಠದಿಂದ ಹಿರೇಮಠದವರೆಗೆ ಮೂರ್ತಿಗಳ ಕುಂಭಮೇಳ ಬಾಜಾ ಭಜಂತ್ರಿಯಿಂದ ಅದ್ದೂರಿ ಮೆರವಣಿಗೆ ನೆರವೇರಿತು.ಷ.ಬ್ರ.ಸಿದ್ದರಾಮ ಶಿವಾಚಾರ್ಯರು ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ,ಷ.ಬ್ರ.ಗುರು ಮಡಿವಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿಮಠ. ಷ.ಬ್ರ.ಅಭಿನವ ಮುನೀಂದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ. ಸಾವಿರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಹಿರೇಮಠದ ಭಕ್ತರಾದ ಕಲಕೇರಿ ಗ್ರಾಮ ಪಂಚಾಯಿತಿ ಸದಸ್ಯರು ಸುಧಾಕರ ಅಡಿಕಿ ಇವರು ಈ ಮಠದಲ್ಲಿ ನಡೆಯುವಂತಹ ಕಾರ್ಯಕ್ರಮಗಳ ಬಗ್ಗೆ ಈ ಮಠದ ಒಡೆಯರ ಆಶೀರ್ವಾದ ಎಲ್ಲಾ ಭಕ್ತರಿಗೆ ಸದಾ ಇದೇ ರೀತಿ ಗುರುಗಳು ಆಶೀರ್ವಾದ ಇರಲೆಂದು ತಿಳಿಸಿದರು ಮಠದಲ್ಲಿ ಬಂದಂತ ಭಕ್ತರಿಗೆ ಅನ್ನ ಪ್ರಸಾದ ಇರುತ್ತದೆ ಸುತ್ತಮುತ್ತ ಹಳ್ಳಿಯ ಎಲ್ಲಾ ಗ್ರಾಮಸ್ಥರು ಪಾಲ್ಗೊಂಡು ಹಿರೇಮಠದಲ್ಲಿ ನಡೆಯುವಂತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೇವೆಯನ್ನು ಸಲ್ಲಿಸಿದರು ಮತ್ತು 4 ನೇ. ತಾರೀಖಿನ ದಿವಸ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿ ಕಾರ್ಯಕ್ರಮ ನಡೆಯುವುದು ಭಕ್ತರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳಿಂದ ಆಶೀರ್ವಾದ ಪದಡೆಯ ಬೇಕೆಂದು ತಿಳಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button