ಸಂಕೋನಟ್ಟಿ ಗ್ರಾಮದಲ್ಲಿ ಸಾಕಿದ ಕುದುರೆ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ಜರುಗಿತು.
ಸಂಕೋನಟ್ಟಿ ಏಪ್ರಿಲ್.02

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಗಜೇಂದ್ರ ಮಾರುತಿ ಹುರಳೆ ಎಂಬುವವರ ಬಾವಿಯೊಂದರಲ್ಲಿ ಅದೇ ಗ್ರಾಮದ ಬೇರೆಯವರು ಸಾಕಿದ ಕುದುರೆ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 02/04/2024 ರಂದು ಬೆಳಗಿನ ಜಾವ ಸಮಯ 08:00ಕ್ಕೆ ಮಂಗಳವಾರ ನಡೆದಿದೆ.

ತಕ್ಷಣ ಸಂಕೋನಟ್ಟಿ ಗ್ರಾಮದ ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರವರು ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿಗಳೊಂದಿಗೆ ಆಗಮಿಸಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 40 ಅಡಿ ಅಳತೆಯ 30×50 ವಿಸ್ತೀರ್ಣದ ಅದರಲ್ಲಿ ಸುಮಾರು 04 ಅಡಿ ಆಳದ ನೀರಿರುವ ಬಾವಿಯಲ್ಲಿ ಕುದುರೆಯೂ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಕಪ್ಟ ಪಟ್ಟು ಸುಮಾರು 01:00 ಒಂದೂ ಗಂಟೆಗಳ ಕಾರ್ಯಚರಣೆಯನ್ನು ಮಾಡಿ ಕುದುರೆಯನ್ನು ಜೀವಂತವಾಗಿ ನೀರಿರುವ ಬಾವಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯವರ ವಿವರಗಳು 01) ಮಲ್ಲಿಕಾರ್ಜುನ ಬಂದಾಳ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ 02) ನಿಲ್ಲಪ್ಪ.ಎಸ್. ಹೆರವಾಡೆ 03) ಶಿವಾನಂದ.ಪೂಜಾರಿ 04) ಸಂಜೀವ.ಚೌಗಲಾ 05) ಶಿವಯ್ಯ ಮಠಪತಿ 06) ಸಂತೋಷ್ .ಚೌಗಲಾ ಅಗ್ನಿಶಾಮಕ ಸಿಬ್ಬಂದಿಯವರು ಮತ್ತು ಸ್ಥಳೀಯರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಥಣಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಸಿಬ್ಬಂದಿ ಯವರುಗಳಿಗೆ ಚಪ್ಪಾಳೆ ಮೂಲಕ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದರು ನೀವು ಮಾಡುವ ಕೆಲಸ ಜೀವ ರಕ್ಷಿಸುವ ಕೆಲಸವಾಗಿದೆ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲವೂ ಉನ್ನತ ಮಟ್ಟದ ದೊಡ್ಡ ಹುದ್ದೆಗಳು ದಯಪಾಲಿಸಲಿ ಎಂದು ಹೇಳಿದರು.