ಕೂಡ್ಲಿಗಿ ವಿಂಡೋ ಪವರ್ ಕಂಪನಿಗಳ ಹಾವಳಿಯಿಂದ ಕೃಷಿಗೆ ಯೋಗ್ಯವಾದ ಭೂಮಿಯನ್ನು ಕಡಿಮೆ ಬೆಲೆಗೆ ಕ್ರಯ ಪತ್ರಗಳೊಂದಿಗೆ ಖರೀದಿಸಿ ರೈತರಿಗೆ ವಂಚನೆ – ರೈತ ಸಂಘ ಆರೋಪ.

ಕೂಡ್ಲಿಗಿ ಏಪ್ರಿಲ್.05

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಾದ್ಯಂತ ಕೃಷಿಕರ ಜಮೀನುಗಳಲ್ಲಿ ಅಳವಡಿಸುತ್ತಿರುವ, ಪವನ ಯಂತ್ರಗಳನ್ನ ಕೃಷಿ ಯೋಗ್ಯ ಜಮೀಗಳಲ್ಲಿ ಹಾಕದಂತೆ ತಡೆಯಬೇಕು. ಮತ್ತು ಪಂಕ ನಿರ್ಮಿಸಿರುವ ಅಕ್ಕ ಪಕ್ಕದ ಜಮೀನುಗಳ ಮಾಲೀಕರಿಗೆ, ಪರಿಹಾರ ನೀಡುವಂತೆ ಕ್ರಮಕ್ಕಾಗಿ ಕರ್ನಾಟಕ ರೈತ ಸಂಘ ಒತ್ತಾಯಿಸಿದೆ. ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ ವತಿಯಿಂದ. ರೈತ ಸಂಘದ ಪದಾಧಿಕಾರಿಗಳು, ಹಾಗೂ ರೈತರು ತಹಸೀಲ್ದಾರ್ ರು ಹಾಗೂ ಉಪ ನೋಂದಣಿ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಪತ್ರ ನೀಡಿದರು. ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲ‍ಾ ಉಪಾಧ್ಯಕ್ಷ, ಎನ್.ಭರಮಣ್ಣ ಮಾತನಾಡಿದರು, ತಾಲೂಕಿನಲ್ಲಿ ಈಗಾಗಲೇ ಜೆಎಸ್ ಡಬ್ಲ್ಯೂ ಜಿಂದಾಲ್ ಕಂಪನಿ ಸೇರಿದಂತೆ ಇತರೆ ಹತ್ತಾರು ಪ್ರತಿಷ್ಠಿತ ಕಂಪನಿಗಳು. ರೈತರ ಹೊಲಗಳಲ್ಲಿ ಪವನ ಯಂತ್ರಗಳನ್ನ ಅಳವಡಿಸುತ್ತಿದ್ದು, ಕೃಷಿಗೆ ಯೋಗ್ಯವಾದ ಜಮೀನುಗಳನ್ನು ಅಲ್ಪ- ಸ್ವಲ್ಪ ಬೆಲೆಗೆ ಕ್ರಯಕ್ಕೆ ಪಡೆದು ನೋಂದಣಿ ಮಾಡಿ ಕೊಳ್ಳುತ್ತಿದ್ದಾರೆ. ಕಾರಣ ತಾವುಗಳು ನೋಂದಣಿ ಅಧಿನಿಯಮ, ಕೃಷಿ ಕಾಯ್ದೆ ಮತ್ತು ಜಮೀನುಗಳ ನಿರ್ದಿಷ್ಟ ಪರಭಾರೆ. ಕೃಷಿ ನಿಯಮಾವಳಿಗಳ ನೋಟಿಫಿಕೇಷನ್ ಧಿಕ್ಕರಿಸಿ, ಖಾಸಗಿ ಕಂಪನಿಗಳ ಹಣದಾಸೆಗೆ ರೈತರ ಪಹಣಿಗಳನ್ನ ಸರಿಯಾಗಿ ಪರಿಶೀಲನೆ ನಡೆಸದೇ ನೋಂದಣಿ ಮಾಡಿಕೊಳ್ಳವುದು ಅಪರಾದ ವಾಗಿರುತ್ತದೆ. ಪವನ ಯಂತ್ರಗಳನ್ನ ಅಳವಡಿಕೆ ಮಾಡುವ ಮೊದಲು, ರೈತರನ್ನು ಹಾಗೂ ಸಂಘಟನೆಗಳ ಸಭೆ ಕರೆದು ಕೃಷಿ ಯೋಗ್ಯ ಭೂಮಿ ಪರಿಶೀಲನೆ ನಡೆಸಬೇಕಿದೆ. ಯೋಗ್ಯವಲ್ಲದ ಜಮೀನುಗಳನ್ನು ಮಾತ್ರ, ಪವನ ಯಂತ್ರಗಳ ಅಳವಡಿಕೆಗೆ ಅವಕಾಶ ಕಲ್ಪಿಸಿ ನೋಂದಣಿ ಮಾಡಿ ಕೊಡಬೇಕು ಎಂದರು. ಅಲ್ಲದೆ ರೈತರ ಜಮೀನುಗಳನ್ನು ನೋಂದಣಿ ಮಾಡಿಸುವಾಗ, ಪ್ರತಿ ಎಕರೆಗೆ ಸರ್ಕಾರ ಹಾಗೂ ಕಂಪನಿ ಯಾವ ಧರ ನಿಗದಿ ಮಾಡಿದೆ ಎಂಬುದು ಮೊದಲು ಸ್ಪಷ್ಟ ಪಡಿಸಬೇಕು. ಮಧ್ಯವರ್ತಿಗಳ ಹಣದಾಸೆಗೆ ರೈತರನ್ನು ವಂಚಿಸಿ ಕಡಿಮೆ ಹಣ ನೀಡಿ, ಮದ್ಯವರ್ತಿಗಳು ಹಣ ಲಪಟಾಯಿಸುತ್ತಿದ್ದಾರೆ.

ಅಲ್ಲದೆ ನಿಗಧಿ ಮಾಡಿದ ಜಮೀನುಗಳಲ್ಲಿ, ಪವನ ಯಂತ್ರಗಳ ಅಳವಡಿಕೆಗೆ ಮಾಡುವಾಗ. ಪಕ್ಕದ ರೈತರ ಜಮೀನುಗಳಲ್ಲಿ ಬಾರಿ ಗಾತ್ರದ ಲಾರಿಗಳು ತಿರುಗಾಡಿ, ಜಮೀನುಗಳನ್ನು ಹಾಳು ಮಾಡುತ್ತಿವೆ ಇದರಿಂದ ರೈತರಿಗೆ ಉಳುಮೆಗೆ ತೊಂದರೆ ಯಾಗುತ್ತಿದೆ. ಆದ್ದರಿಂದ ಪಕ್ಕದ ಜಮೀನುಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ಕಂದಾಯ ಹಾಗೂ ನೋಂದಣಿ ಅಧಿಕಾರಿಗಳು ಮೊದಲು ಕೃಷಿಯೋಗ್ಯ ಭೂಮಿಯನ್ನು ಪವನ ಯಂತ್ರಗಳ ಅಳವಡಿಕೆಗೆ ತಡೆ ಹಾಕಿ. ಯೋಗ್ಯವಲ್ಲದ ಜಮೀನುಗಳಲ್ಲಿ ಮಾತ್ರ ಅವಕಾಶ ನೀಡಿ, ರೈತರಿಗೆ ನೇರವಾಗಿ ನೀಡಬೇಕಾದ ಹಣವನ್ನು ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ, ಕಾನೂನಾತ್ಮಕವಾಗಿ ಹೋರಾಟ ಹಾಗೂ ಕಚೇರಿಗಳ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.ಉಪ ತಹಸೀಲ್ದಾರ್ ಚಂದ್ರಶೇಖರ ಹಾಗೂ ಉಪ ನೋಂದಣಿ ಅಧಿಕಾರಿ, ಎಂ.ವೈಶಾಲಿ ಪ್ರತ್ಯೇಕವಾಗಿ ಮನವಿ ಸ್ವೀಕಾರ ಮಾಡಿದರು.ರೈತ ಸಂಘದ ಪದಾಧಿಕಾರಿಗಳಾದ ಕಾಟೇರು ಶೇಷಪ್ಪ, ಪರುಸಪ್ಪ, ಹನುಮಂತಪ್ಪ, ಕೊಟ್ರಪ್ಪ, ಗೋಣೆಪ್ಪ, ಟಿ.ಮಲಿಯಪ್ಪ, ಬಿ.ಬಸವರಾಜ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಇದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button