ಕಲಕೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚುನಾವಣೆ ಪ್ರಚಾರ ಕೈಗೊಂಡ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರೊ. ರಾಜು ಆಲಗೂರ.
ಕಲಕೇರಿ ಏಪ್ರಿಲ್.07

ವಿಜಯಪುರ 04 ಮೀಸಲು ಕ್ಷೇತ್ರ ಲೋಕಸಭಾ ಚುನಾವಣೆ 2024 ದೇವರ ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚುನಾವಣೆ ಪ್ರಚಾರ. ನಮ್ಮ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಯೋಜನೆ ಈಗಾಗಲೇ ಬಿಡುಗಡೆ ಆಗಿದೆ ಎರಡನೇ ಯೋಜನೆ ಮಹಿಳೆಯರಿಗೆ ಒಂದು ವರ್ಷಕ್ಕೆ 1 ಲಕ್ಷ ಮಹಿಳೆಯರಿಗಾಗಿ ಯೋಜನೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು ಕಲಕೇರಿಯಲ್ಲಿ ಜಿಲ್ಲಾ ಪಂಚಾಯಿತಿಯ ಚುನಾವಣೆ ಪ್ರಚಾರ ಭಾನುವಾರ ನಡೆದ ಜಿ.ಪಂ ವ್ಯಾಪ್ತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ, ‘ದೇಶವನ್ನು ಬುಡದಿಂದ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ, ದೇಶವನ್ನು ಹಾಳುಗೆಡವಿ ಪಕೋಡ ಮಾರಲು ಹಚ್ಚಿದ್ದು ಮೋದಿಯವರ ಬಿಜೆಪಿ ಎಂದು ಹೇಳಿದರು.ನೀವೆಲ್ಲ ಸೌಖ್ಯದಿಂದ ಇರಬೇಕಾದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಜನರ ಜೀವನ ಸುಧಾರಿಸ ಬೇಕಾದರೆ ನಮ್ಮ ಪಕ್ಷಕ್ಕೆ ಮತ ನೀಡಿ. ರಾಜ್ಯ ಸರಕಾರ ನೀಡಿದ್ದ ಭರವಸೆಗಳೆಲ್ಲ ಈಡೇರಿಸಿದೆ. ನಮಗೆ ಓಟು ಕೇಳಲು ನೈತಿಕತೆ ಇದೆ.

ಬಿಜೆಪಿಯವರ ಸುಳ್ಳಿನ ಮಾತಗಳನ್ನು ನಂಬ ಬೇಡಿ. ರಮೇಶ ಜಿಗಜಿಣಗಿಯವರು ಮೂವತ್ತು ವರ್ಷ ಲೋಕಸಭೆ ಸದಸ್ಯರಾಗಿ ಏನು ಮಾಡಿದ್ದಾರೆ ಹೇಳಿ. ಹಾಗಾಗಿ ಇದು ಬದಲಾವಣೆಯ ಸಮಯ. ಅವರನ್ನು ಬದಲಿಸಿ, ನಮಗೆ ಬೆಂಬಲಿಸಿ ಎಂದು ವಿನಂತಿಸಿದರು.ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ನುಡಿದಂತೆ ನಡೆದದ್ದು ಹಾಗೂ ಮುಂದೆಯೂ ನಡೆಯುವುದು ಕಾಂಗ್ರೆಸ್ ಎಂದರು.ಮುಖಂಡರಾದ ಸುಭಾಶ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಗೌರಮ್ಮ ಮುತ್ತತ್ತಿ, ಲಲಿತಾ ದೊಡ್ಡಮನಿ, ಸರಿತಾ ನಾಯಕ, ರಮೀಜಾ ನದಾಫ್, ಬಶೀರ್ ಬೇಪಾರಿ, ಬಾಳಾಸಾಹೇಬ ಪಾಟೀಲ, ಬಾಪುಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಪರಶುರಾಮ ದಿಂಡವಾರ, ರಮೇಶ ಗುಬ್ಬೇವಾಡ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ನಿರೂಪಣೆಗಾರರು ಲಕ್ಕಪ್ಪ ಬಡಿಗೇರ. .ಜಾಂಗೀರಭಾಷಾ ಸಿರಸಗಿ .ದಾವಲಸಾಬ ನಾಯ್ಕೋಡಿ, ದೇವೇಂದ್ರ ಜಂಬಗಿ, ಕಾಶೀನಾಥ ತಳವಾರ, ರವೀಂದ್ರ ಸುಧಾಕರ, ಶಿವರಾಯ ಮೋಪಗಾರ, ರಾಜ ಅಹ್ಮದ ಸಿರಸಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕಲಕೆರಿ. ಅರವಿಂದ ಬೇನಾಳ. ಡಾ. ಹಸನ ನಾಗಾವಿ. ಮೈನುದ್ದೀನ ಮನಿಯರ. ನಬಿಲಾಲ ನಾಯ್ಕೋಡಿ. ಬುಡ್ಡ ದೊಡ್ಡಮನಿ. ರಮೇಶ ಮೋಪಗಾರ. ಹುಸೇನ ನಾಯ್ಕೋಡಿ. ಮಹೆಬೂಬ ಮೇಲಿನಮನಿ. ಹಲವಾರು ಕಾರ್ಯಕರ್ತರು ಊರಿನ ಜನರು ಸುತ್ತಮುತ್ತ ಹಳ್ಳಿಯ ಸಾರ್ವಜನಿಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ