ಈ ದೇಶ ಕಟ್ಟಿದ್ದು ಕಾಂಗ್ರೇಸ್ ಪಕ್ಷ, ಪಕೋಡಾ ಮಾರಿಸುತ್ತಿರುವುದು ಬಿಜೆಪಿ ಎಂದು – ರಾಜು ಆಲಗೂರ.
ಹುಣಶ್ಯಾಳ ಏಪ್ರಿಲ್.08

ದೇವರ ಹಿಪ್ಪರಗಿ ತಾಲ್ಲೂಕಿನ ಹುಣಶ್ಯಾಳ ಜಿಲ್ಲಾ ಪಂಚಾಯತ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ, ‘ದೇಶವನ್ನು ಬುಡದಿಂದ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ, ದೇಶವನ್ನು ಹಾಳುಗೆಡವಿ ಪಕೋಡ ಮಾರಲು ಹಚ್ಚಿದ್ದು ಮೋದಿಯವರ ಬಿಜೆಪಿ ಎಂದು ಹೇಳಿದರು.ನೀವೆಲ್ಲ ಸೌಖ್ಯದಿಂದ ಇರಬೇಕಾದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಜನರ ಜೀವನ ಸುಧಾರಿಸ ಬೇಕಾದರೆ ನಮ್ಮ ಪಕ್ಷಕ್ಕೆ ಮತ ನೀಡಿ.

ರಾಜ್ಯ ಸರಕಾರ ನೀಡಿದ್ದ ಭರವಸೆಗಳೆಲ್ಲ ಈಡೇರಿಸಿದೆ. ನಮಗೆ ಓಟು ಕೇಳಲು ನೈತಿಕತೆ ಇದೆ. ಬಿಜೆಪಿಯವರ ಸುಳ್ಳಿನ ಮಾತಗಳನ್ನು ನಂಬಬೇಡಿ. ರಮೇಶ ಜಿಗಜಿಣಗಿಯವರು ಮೂವತ್ತು ವರ್ಷ ಲೋಕಸಭೆ ಸದಸ್ಯರಾಗಿ ಏನು ಮಾಡಿದ್ದಾರೆ ಹೇಳಿ. ಹಾಗಾಗಿ ಇದು ಬದಲಾವಣೆಯ ಸಮಯ. ಅವರನ್ನು ಬದಲಿಸಿ, ನಮಗೆ ಬೆಂಬಲಿಸಿ ಎಂದು ವಿನಂತಿಸಿದರು.ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ನುಡಿದಂತೆ ನಡೆದದ್ದು ಹಾಗೂ ಮುಂದೆಯೂ ನಡೆಯುವುದು ಕಾಂಗ್ರೆಸ್ ಎಂದರು ಬಡವರು ಬಳಸುವ ಆಹಾರ ಧಾನ್ಯಗಳ ಬೆಲೆ ಗಮನಕ್ಕೆ ಏರಿದೆ ಹಾಗೂ ಡೀಸಲ್, ಪೆಟ್ರೋಲ್ ಅಡಿಗೆಅನಿಲ ಹಾಗೂ ಇನ್ನೂ ಮುಂತಾದ ವಸ್ತು ಗಳು ಬೆಲೆ ಏರಿಕೆ ಅಗಿದೆ ಈ ಬಿಜೆಪಿ ಸರ್ಕಾರ ಬೇಗನೆ ಕಿತ್ತಿ ವಗೆಯಬೇಕು ಎಂದು ಹೇಳಿದರು ಹಾಗೂ ಬಿ.ಎಸ್. ಪಾಟೀಲ ಯಾಳಗಿ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಬಶೀರ್ ಶೇಟ.ಬೇಪಾರಿ ಇವರೂ ಕೂಡಾ ಮಾತನಾಡಿದರು, ಈ ಪ್ರಚಾರ ಕಾರ್ಯಕ್ರಮದಲ್ಲಿ ಸುಭಾಷ್ ಛಾಯಾಗೋಳ ,ಗೌರಮ್ಮ ಮುತ್ತತ್ತಿ, ಲಲಿತಾ ದೊಡ್ಡಮನಿ, ಸರಿತಾ ನಾಯಕ, ರಮೀಜಾ ನದಾಫ್, ಬಶೀರ್ ಬೇಪಾರಿ, ಬಾಳಾಸಾಹೇಬ ಪಾಟೀಲ, ಬಾಪುಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಪರಶುರಾಮ ದಿಂಡವಾರ, ರಮೇಶ ಗುಬ್ಬೇವಾಡ,ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.