ಕಲಕೇರಿ ಪೋಲೀಸ್ ಠಾಣೆಯಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು.

ಕಲಕೇರಿ ಏಪ್ರಿಲ್.09

ಕಲಕೇರಿಯ ಪೊಲೀಸ್ ಠಾಣೆಯ ಪಿಎಸ್ಐ ರೋಹಿಣಿ ಪಾಟೀಲ ಮೇಡಂ ಅವರು ಮುಸ್ಲಿಂ ಬಾಂಧವರಿಗೆ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಿ ಎಂದು ಎಲ್ಲಾರೂ ಸೇರಿದಂತಹ ಎಲ್ಲಾ ಸಾರ್ವಜನಿಕರಿಗೆ ತಿಳಿಸಿದರು ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಹಿಂದೂ ಮುಸ್ಲಿಂ ಬಾಯಿ ಬಾಯಿ ಎಂದು ಎಲ್ಲರೂ ಒಂದಾಗಿ ಯುಗಾದಿ ರಂಜಾನ್ ಹಬ್ಬವನ್ನು ಶಾಂತ ರೀತಿಯಿಂದ ಆಚರಣೆ ಮಾಡಬೇಕು ಎಂದು ತಿಳಿಸಿದರು.ದಾವಲ ನಾಯ್ಕೋಡಿ, ಕಾಸಿಂಸಾಬ ನಾಯ್ಕೋಡಿ ಇವರು ನಮ್ಮ ಊರಿನಲ್ಲಿ ಜಾತಿ ಮತ ಎನ್ನದೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಎಲ್ಲಾ ಹಬ್ಬಗಳನ್ನು ಒಂದಾಗಿ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು, ರಾಜ್ ಅಹ್ಮದ ಸಿರಸಗಿ,ಅಹಮದಹುಸೇನ ಮೋಮಿನ, ಅಲ್ಲಾಬಾಕ್ಸ್ ಸುತಾರ, ಲಾಳೇ ಸಾಬ ನಾಯ್ಕೋಡಿ, ಹಣಮಂತ ವಡ್ಡರ ಇವರು ಕೂಡ ನಮ್ಮ ಊರಿನಲ್ಲಿ ಪ್ರತಿಯೊಂದು ಹಬ್ಬಗಳನ್ನು ಬಂದರೆ ಹಿಂದೂ-ಮುಸ್ಲಿಂ ಒಂದಾಗಿ ಹಬ್ಬಗಳನ್ನು ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.

ಮೈನುದ್ದೀನ ನಾಯ್ಕೋಡಿ, ನಬಿಲಾಲ ನಾಯ್ಕೋಡಿ ಇವರು ನಮ್ಮ ಭಾಗದಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಹಿಂದೂ ಮುಸ್ಲಿಂ ಎನ್ನದೆ ಒಂದೇ ತಾಯಿಯ ಮಕ್ಕಳಂತೆ ನಾವು ಹಬ್ಬಗಳನ್ನು ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು,ಶ್ರೀಶೈಲ ಜಾಲವಾದಿ ಇವರು ಕೂಡ ಆ ಜಾತಿ ಈ ಜಾತಿ ಎನ್ನುವುದು ಭಾವನೆಗಳನ್ನು ಯಾರಲ್ಲಿ ಇಲ್ಲ ನಾವು ಹಿಂದೂ ಮುಸ್ಲಿಂ ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು,ಲಕ್ಕಪ್ಪ ಬಡಿಗೇರ ಇವರು ನಮ್ಮ ಭಾಗದಲ್ಲಿ ನಾವು ಎಲ್ಲರೂ ಅಣ್ಣ ತಮ್ಮ ಮಾವ ಅಳಿಯ ಕಾಕಾ ಎನ್ನುತ್ತಾ ಒಂದೇ ಭಾವನೆಗಳನ್ನು ಇಟ್ಟುಕೊಂಡು ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಒಳ್ಳೆಯ ರೀತಿಯಿಂದ ಶಾಂತತೆಯಿಂದ ಒಂದೇ ತಾಯಿಯ ಮಕ್ಕಳಂತೆ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿವೆ ಇಲ್ಲಿ ಜಾತಿ ಮತ ಎನ್ನುವ ಭಾವನೆ ಇಲ್ಲ ಯಾವುದೇ ಹಬ್ಬಗಳನ್ನು ಬಂದರೆ ಹಿಂದೂ ಮುಸ್ಲಿಮ್ಸ್ ಒಂದಾಗಿ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿವೆ ಎಂದು ತಿಳಿಸಿದರು, ಸದ್ದಾಮ ಕೋಬಾಳ, ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button