ಸರದಿ ಪ್ರಕಾರ ನಿಂತು ಸ್ವಾಮಿ ದರ್ಶನ ಪಡೆದ ಶಾಸಕ.
ಕೊಟ್ಟೂರು ಏಪ್ರಿಲ್.09

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಆರಾಧ್ಯದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ಕೆ ನೇಮಿರಾಜ್ ನಾಯಕ್ ಶಾಸಕರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಯುಗಾದಿ ಅಮಾವಾಸ್ಯೆ ದಿನ ಸರದಿ ಪ್ರಕಾರ ಜನ ಸಾಮಾನ್ಯರಂತೆ ಕಾದು ನಿಂತು ಸ್ವಾಮಿಯ ದರ್ಶನ ಪಡೆದು ಕೊಂಡರು.ಈ ಸಂದರ್ಭದಲ್ಲಿ ಎಂ ಎಂ ಜೆ ಹರ್ಷವರ್ಧನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಬಾದಾಮಿ ಮುತ್ತಣ್ಣ ಅಜ್ಜನಗೌಡ್ರು ಮರಬದ ನಾಗರಾಜ್ ಅಟವಳಿ ಸಂತೋಷ್ ಜಗದೀಶ್ ಉಮೇಶ್ ಗೌಡ ದೇವಸ್ಥಾನದ ಧರ್ಮ ಕರ್ತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.