ಕಲಕೇರಿ ಗ್ರಾಮ ಪಂಚಾಯಿತಿಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.
ಕಲಕೇರಿ ಏಪ್ರಿಲ್.14

ಕಲಕೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಎಪ್ರಿಲ್ 14.4.2024 ರಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ.133 ನೇ. ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಲಾಯಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜ್ ಅಹ್ಮದ್ ಸಿರಸಗಿ . ಪರಶುರಾಮ್ ಬೇಡರ ಊರಿನ ಮುಖಂಡರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸನಗೌಡ ಚೌದರಿ.ತಾಲೂಕ್ ಪಂಚಾಯಿತಿ ಮಾಜಿ ಸದಸ್ಯರಾದ ಲಕ್ಕಪ್ಪ ಬಡಿಗೇರ ಇವರು ಸಂವಿಧಾನದ ಬಗ್ಗೆ ಭಾರತದಲ್ಲಿ ನಾವು ಯಾವ ರೀತಿ ಬದುಕಬೇಕು ಎಂಬುವುದನ್ನು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತ ಮಾರ್ಗದಲ್ಲಿ ನಾವು ಇರಬೇಕು ಎಂದು ಈ ಸಂದರ್ಭದಲ್ಲಿ ಎಲ್ಲರನ್ನೂ ಜಾತಿ ಮತ ಎನ್ನದೆ ಒಂದಾಗಿ ಬಾಬಾ ಸಾಹೇಬರು ಹೇಳಿಕೊಟ್ಟಂತ ಮಾರ್ಗದಲ್ಲಿ ನಾವೆಲ್ಲ ಇರಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಹಣಮಂತ್ ವಡ್ಡರ್ ಭವಾನಿ ಕಂಪ್ಯೂಟರ್ ತರಬೇತಿ ಅಧ್ಯಕ್ಷರು ಇವರು ಕೂಡ ಪ್ರತಿಯೊಬ್ಬರಿಗೆ ಹಕ್ಕನ್ನು ಕೊಟ್ಟಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಜಗತ್ತಿನಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಹಕ್ಕನ್ನು ಕೊಟ್ಟಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತ ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು. ನಬಿಲಾಲ್ ನಾಯ್ಕೋಡಿ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೆ ಹಕ್ಕನ್ನು ನೀಡಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರೂ ಒಂದಾಗಿ ಇರಬೇಕು ಪ್ರತಿಯೊಬ್ಬರಿಗೆ ಓಟಿನ ಹಕ್ಕನ್ನು ಕೊಟ್ಟವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವರ ಹೇಳಿದಂತೆ ಮಾರ್ಗದಲ್ಲಿ ನಾವು ಎಲ್ಲರೂ ಇರಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸುಧಾಕರ್ ಅಡಿಕಿ ಇವರು ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳನ್ನು ತಿಳಿಸಿ ಅವರ ಹೇಳಿದಂತ ಮಾರ್ಗದಲ್ಲಿ ಭಾರತದಲ್ಲಿ ನಾವು ಎಲ್ಲರೂ ಒಂದಾಗಿ ಜಾತಿ ಮತ ಎನ್ನದೆ ಎಲ್ಲರೂ ಒಂದಾಗಿ ಇರೋಣ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಊರಿನ ಎಲ್ಲಾ ಮುಖಂಡರು ಹಿರಿಯರು ಯುವಕರು ಎಲ್ಲರೂ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.