ಡಾ. ಬಿ.ಆರ್.ಅಂಬೇಡ್ಕರ್ ಕೇವಲ ದಲಿತ ಸಮುದಾಯದ ವಿಮೋಚಕರಲ್ಲ – ಡಾ. ರಾಜಣ್ಣ.
ನೇರ್ಲಹಳ್ಳಿ ಏಪ್ರಿಲ್.14

ಎಲ್ಲಾ ಸಮುದಾಯಗಳ ಏಳಿಗೆಗೆ ಶ್ರಮಿಸಿದರು ಹೀಗಾಗಿ ಅಂಬೇಡ್ಕರ್ ಕೇವಲ ದಲಿತ ಸಮುದಾಯದ ವಿಮೋಚಕರಲ್ಲ ಎಂದು ಸಮಾಜಶಾಸ್ತ್ರ ಉಪನ್ಯಾಸಕ ಡಾ.ರಾಜಣ್ಣ ಹೇಳಿದರು.ಮೊಳಕಾಲ್ಮೂರು ತಾಲ್ಲೂಕಿನ ನೇರ್ಲಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.ದೇಶದಲ್ಲಿ ರಾಜಕೀಯ ಸಮಾನತೆ ಮೂಡಿ ಬರಲು ಅಂಬೇಡ್ಕರ್ ಕಾರಣಿ ಪುರುಷರಾಗಿದ್ದಾರೆ. ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು ತುಳಿತಕ್ಕೆ ಒಳಗಾದವರ ಬಗ್ಗೆ ಹೋರಾಡಲು ಅವರನ್ನು ಪ್ರೇರೆಪಿಸಿದವು. ವಿದ್ಯಾರ್ಥಿ ದೆಸೆಯಿಂದಲೂ ಅಂಬೇಡ್ಕರ್ ಹೋರಾಟದ ಮನೋಭಾವ ಹೊಂದಿದ್ದರು ಎಂದರು.ಡಾ.ಬಿ.ಆರ್ .ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಆರ್ .ಸತ್ಯಪ್ಪ ಮಾತನಾಡಿ ಸ್ವಾತಂತ್ರ್ಯ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಕಾನೂನು ಸಚಿವರಾಗಿ ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದರು. ಅಂಬೇಡ್ಕರ್ ದಣಿವರಿಯದೆ, ವಿಶ್ರಾಂತಿ ಬಯಸದೆ, ಸದಾ ದಲಿತರ ಏಳಿಗೆ ಬಗ್ಗೆ ಚಿಂತಿಸಿದರು ಎಂದು ತಿಳಿಸಿದವರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ ಮಾತನಾಡಿ ಬಹಿಷ್ಕೃತ ಸಮಾಜ, ಮೂಕನಾಯಕ ಅವರು ಹೊರತಂದ ಪತ್ರಿಕೆಗಳಾಗಿವೆ. ಭಾರತದಲ್ಲಿ ಮೊದಲ ಬಾರಿ ಕಾನೂನಿನ ಮೂಲಕ ಸ್ತ್ರೀ ಸ್ವಾತಂತ್ರ್ಯ ಚಿಂತನೆಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಅಂಬೇಡ್ಕರ್ ಕೊಡುಗೆಯನ್ನು ನಾವು ಗ್ರಹಿಸಬೇಕು ಎಂದರು.ಪ್ರಧಾನ ಕಾರ್ಯದರ್ಶಿ ಎನ್.ಟಿ. ಸಂತೋಷ ಕುಮಾರ್ ಮಾತನಾಡಿ ಅಂಬೇಡ್ಕರ್ ಭಾರತದ ಜ್ಞಾನದ ಸಂಕೇತವಾಗಿದ್ದಾರೆ. ಬಾಲ್ಯದಲ್ಲಿ ಬುದ್ದನ ಸಮಾನತೆ ವಿಚಾರಗಳಿಂದ ಅಂಬೇಡ್ಕರ್ ಪ್ರಭಾವಿತರಾಗಿದ್ದರು. ಅವರಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಕಳಕಳಿ ಹಾಗೂ ಬದ್ದತೆ ಇತ್ತು. ಅರ್ಥಶಾಸ್ತ್ರ, ರಾಜಕೀಯ, ಮಾನವಶಾಸ್ತ್ರಗಳಲ್ಲಿ ಅಪಾರ ಜ್ಞಾನ ಗಳಿಸಿದ್ದರು. ಇದರ ಜೊತೆಗೆ ಶ್ರೇಷ್ಠ ಕಾನೂನು ತಜ್ಞರೂ ಆಗಿದ್ದರು ಎಂದರು.ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ಎನ್ .ಡಿ. ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಪಾಲಯ್ಯ, ಭಂಗಿ ಸೂರಯ್ಯ, ಶಿವಣ್ಣ,ಗಂಗರೆಡ್ಡಿ, ಮಾದಿಗ ದಂಡೊರ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ದುರುಗೇಶ, ಸಂಘಟನಾ ಕಾರ್ಯದರ್ಶಿ ಸೋಮಶೇಖರ್, ಸಹಕಾರ್ಯದರ್ಶಿ ಚಂದ್ರಶೇಖರ್,ಖಜಾಂಚಿ ಟಿ.ಎನ್ ಶಿವಣ್ಣ, ಪ್ರಧಾನ ಸಂಚಾಲಕ ಎನ್.ಆರ್.ತಿಫ್ಪೇಸ್ವಾಮಿ, ಸಂಚಾಲಕರಾದ ಬಿ.ಎನ್. ರವಿಚಂದ್ರ, ಎನ್ ಟಿ. ತಿಪ್ಪೇಸ್ವಾಮಿ,ಶಂಕರಪ್ಪ, ಡಿ.ಎನ್.ಶಿವಣ್ಣ,ಎನ್.ಡಿ.ತಿಪ್ಪೇಸ್ವಾಮಿ ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಮತ್ತಿತರರು ಇದ್ದರು.
ವರದಿ:ಆರ್.ರವಿಚಂದ್ರ.ಚಿತ್ರದುರ್ಗ