ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ.
ಕಾನಾ ಹೊಸಹಳ್ಳಿ ಏಪ್ರಿಲ್.14

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿ ನಾಡ ಕಚೇರಿಯಲ್ಲಿ ಭಾನುವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 133 ನೇ. ಜಯಂತೋತ್ಸವದ ನಿಮಿತ್ತ ಭಾವಚಿತ್ರಕ್ಕೆ ಪುಷ್ಪ ಮಾಲೆ ಸಲ್ಲಿಸಿ ನಂತರ ಉಪ ತಹಶೀಲ್ದಾರ್ ಚಂದ್ರಮೋಹನ್ ಮಾತನಾಡಿ. ದೇಶದಲ್ಲಿರುವ ಎಲ್ಲ ವರ್ಗದ ಬಡವರು ದಲಿತರು ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಅವರು ಹಕ್ಕುಗಳಿಗೆ ಧ್ವನಿಯಾಗಿದ್ದರು ವಿಶ್ವ ಕಂಡ ಮಹಾನ್ ನಾಯಕ ಹಾಗೂ ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದರು. ಇದೇ ಸಂದರ್ಭದಲ್ಲಿ ಪ್ರಭಾರಿ ಕಂದಾಯ ಪರಿವೀಕ್ಷಕರಾದ ಚನ್ನಬಸಯ್ಯ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ ಕೊಂಡಿ. ಕೊಟ್ರೇಶ.ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ ಸ್ವಾಮಿ. ಮತ್ತು ಹೇಮಂತ್. ನಡೆದು ಮನೆ ತಿಪ್ಪೇಸ್ವಾಮಿ. ಶ್ರೀಧರ. ಸ್ವಾಮಿ. ಸೇರಿದಂತೆ ಗ್ರಾಮ ಸಹಾಯಕ ಬೋರಪ್ಪ. ಯುವಕರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ.