ಮೊಳಕಾಲ್ಮುರು ತಾಲ್ಲೂಕಿನ ಹೋಬಳಿ ಮಟ್ಟದ ಚುನಾವಣೆ ಬಹಿರಂಗ ಪ್ರಚಾರ ಸಭೆ ನಡೆಸಿದ – ಶಾಸಕರು.
ಕಸಬಾ ಏಪ್ರಿಲ್.19

ಮೊಳಕಾಲ್ಮೂರು ಪಟ್ಟಣದ ಕೋನಸಾಗರಸ್ತೆ ಇರುವ ಖಾದರ್ ಆಯಿಲ್ ಮಿಲ್ ಆವರಣದಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನೆಲೆ ಮೊಳಕಾಲ್ಮೂರು ಪಟ್ಟಣ ಹಾಗೂ ಕಸಬಾ ಹೋಬಳಿ ಮಟ್ಟದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡು ಮಾತನಾಡಿದರು.ಮತದಾರ ಬಂಧುಗಳು ಹಸ್ತದ ಗುರುತಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಪಕ್ಷದ ಅಭ್ಯರ್ಥಿಯಾದ ಬಿ ಎನ್ ಚಂದ್ರಪ್ಪ ಅವರನ್ನು ಹೆಚ್ಚಿನ ಬಹುಮತ ದಿಂದ ಹಾರಿಸುವಂತೆ ವಿನಂತಿ ಮಾಡಿದರು.

ಕಾಂಗ್ರೆಸ್ ಪಕ್ಷದ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿಗಳಾದ ಮಯೂರ್ ಜಯಕುಮಾರ್ ಪಕ್ಷದ ಅಭ್ಯರ್ಥಿಯಾದ ಬಿ ಎನ್ ಚಂದ್ರಪ್ಪ ಹಿರಿಯ ಹಾಗೂ ಯುವ ಮುಖಂಡರುಗಳು, ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು, ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮುರು