ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ರೂಪಿಸಲಿಕ್ಕೆ ಶಕ್ತಿ ಕೊಟ್ಟಂತಾಗುತ್ತದೆ ಎಂದ ಶಾಸಕರು.
ಮೊಳಕಾಲ್ಮುರು ಏಪ್ರಿಲ್.21

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಳಕು ಹೋಬಳಿ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಾದ ತಳಕು, ದೊಡ್ಡ ಉಳ್ಳಾರ್ತಿ, ರೇಣುಕಾಪುರ, ಮೈಲಹಳ್ಳಿ, ಓಬಳಾಪುರ, ಘಟಪರ್ತಿ, ದೇವರಡ್ಡಿಹಳ್ಳಿ, ಗೌರಸಮುದ್ರ, ಗ್ರಾಮಗಳಿಗೆ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಭೇಟಿ ನೀಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಿ ಎನ್ ಚಂದ್ರಪ್ಪನವರಿಗೆ ನಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು. ಮತ್ತು ಈ ಗ್ರಾಮಗಳಿಗೆ ಯಾರೂ ಮಾಡದ ಯೋಜನೆಗಳನ್ನು ನಾನು ಈಗ ಶಾಸಕನಾಗಿ ಈ ಗ್ರಾಮಗಳಿಗೆ ಹೆಚ್ಚು ಅನುದಾನ ಯೋಜನೆಗಳನ್ನು ರೂಪಿಸಿರುತ್ತೇನೆ.

ಏಕೆಂದರೆ ಇದು ಬಡ ಪ್ರದೇಶ ಇಲ್ಲಿ ನೀರಿನ ಸೌಲಭ್ಯ ಇರುವುದಿಲ್ಲ ಆದ ಕಾರಣ ಇಲ್ಲಿ ನೀರಾವರಿ ಯೋಜನೆ ರೂಪಿಸಿದರೆ ಎಲ್ಲಾ ಸಮುದಾಯದ ರೈತರು ಮತ್ತು ಕೃಷಿಕರು ದನಕರಗಳು ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುತ್ತದೆ ಎಂದು ಸುಮಾರು 2000 ಎಕರೆಗೆ ನೀರು ಹರಿಯುವ ಚಾನಲ್ ಅನ್ನು ರೂಪಿಸಿರುತ್ತೇನೆ ಆದಕಾರಣ ತಾವು ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಕೊಟ್ಟು ಬಿ ಎಂ ಚಂದ್ರಪ್ಪನವರನ್ನು ಗೆಲ್ಲಿಸಿಕೊಟ್ಟರೆ ಕೇಂದ್ರ ಮತ್ತು ರಾಜ್ಯ ಯೋಜನೆಗಳನ್ನು ತರುವುದಕ್ಕೆ ಅತಿ ಹೆಚ್ಚಿನ ಅನುದಾನ ಯೋಜನೆಗಳನ್ನು ರೂಪಿಸಿ ತಂದು ಬರದ ನಾಡನ್ನು ಹಸಿರು ಕ್ರಾಂತಿಯಾಗಿ ಮಾಡುತ್ತೇನೆ ಎಂದು ಶಾಸಕರು ಮಾತನಾಡಿದರು ಈ ಸಂದರ್ಭದಲ್ಲಿಹಿರಿಯ ಮುಖಂಡರುಗಳು,ಚುನಾಯಿತ ಜನ ಪ್ರತಿನಿಧಿಗಳು, ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.