ಕಾಂಗ್ರೇಸ್ ಅಭ್ಯರ್ಥಿ ಪರವಾಗಿ ಡಾ. ಎನ್.ಟಿ.ಶ್ರೀನಿವಾಸ್ – ಮತ ಯಾಚಿಸಿದರು.
ಕಾನಾ ಹೊಸಹಳ್ಳಿ ಏಪ್ರಿಲ್.28

ಈ ಬಾರಿ ನನ್ನನ್ನು ಹೇಗೆ ವಿಧಾನ ಸಭಾ ಚುನಾವಣೆಯಲ್ಲಿ ಆಶೀರ್ವದಿಸಿದ್ದೀರಿ, ಅದಕ್ಕಿಂತ ಹೆಚ್ಚಿನ ಮತಗಳ ಮೂಲಕ ಆಶೀರ್ವದಿಸಿ, ಪ್ರಚಂಡ ಬಹು ಮತವನ್ನು ನಮ್ಮ ಕೂಡ್ಲಿಗಿ ಕ್ಷೇತ್ರದಿಂದ, ನುಡಿದಂತೆ ನಡೆಯುವ ಸರ್ಕಾರದ ಅಭ್ಯರ್ಥಿಯಾದ, ಈ ತುಕಾರಾಮ್ ನವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡ ಬೇಕೆಂದು ಕ್ಷೇತ್ರದ ಜನತೆಗೆ ಮನವರಿಕೆ ಮಾಡಿದರು. ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಗುಡೇಕೋಟೆ, ಅಪ್ಪೇನಹಳ್ಳಿ, ಗಂಡ ಬೊಮ್ಮನಹಳ್ಳಿ, ಚಿರತಗುಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈ. ತುಕರಾಮ್ ಪರವಾಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಅವರು ಮತಯಾಚನೆ ಮಾಡಿದರು. ಇನ್ನು ಹಳ್ಳಿಗಳಲ್ಲಿ ಶಾಸಕರು ಹೋದ ಕಡೆಯಲ್ಲ ಜನ ಸಾಗರವೇ ತುಂಬಿ ತುಳುಕುತ್ತಿತ್ತು. ಈ ಬಾರಿ ನಾವು ಕಾಂಗ್ರೆಸ್ ಪಕ್ಷದ ಋಣದಲ್ಲಿ ಇದ್ದೇವೆ. ಈ ಬಾರಿ ನಮ್ಮ ವೋಟು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಮಹಿಳೆಯರು ಹೇಳುತ್ತೀರುವುದು ವಿಶೇಷವಾಗಿತ್ತು.ಈ ವೇಳೆ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿ ಶಾಸಕನಾಗಿ ಆಯ್ಕೆ ಮಾಡಿದ್ದೀರಾ. ನನ್ನ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳ ಮೂಲಕ ಲೋಕಸಭಾ ಚುನಾವಣೆ ಅಭ್ಯರ್ಥಿ ಈ. ತುಕರಾಮ್ ಅವರನ್ನು ಲೋಕಸಭಾ ಸದಸ್ಯರನ್ನಾಗಿ ನಾವೆಲ್ಲರೂ ಸೇರಿ ಅವರನ್ನು ಆಯ್ಕೆ ಮಾಡಿ ಕಳಿಸಬೇಕು. ನಮ್ಮ ಕರ್ನಾಟಕದ ಪರವಾಗಿ ಧ್ವನಿ ಯೆತ್ತುವುದಕ್ಕೆ ನಮ್ಮ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಅಂತರ ಕೊಡಬೇಕು ಎಂದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರದ ನಮ್ಮ ಸರ್ಕಾರ ಜನ ಪರವಾದಂತಹ ಸರ್ಕಾರ. ಈ ಹಿಂದೆಯೂ ಕೂಡ ಕಾಂಗ್ರೆಸ್ ಸರ್ಕಾರ ಮಾಡಿದಂತ ಯೋಜನೆಗಳು ಬಿಟ್ಟರೆ ಬಳ್ಳಾರಿ ಲೋಕಸಭಾ ಅಭ್ಯರ್ಥಿಗಳು ಕೇಂದ್ರದಿಂದ ಯಾವ ಅನುದಾನವು ತಂದಿಲ್ಲ. ಅದಕ್ಕೆ ಈ ಬಾರಿ ನಮ್ಮ ಕ್ಷೇತ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಲೋಕಸಭಾ ಚುನಾವಣೆ ಅಭ್ಯರ್ಥಿಯಾದ, ಈ ತುಕಾರಾಮ್ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಕ್ಷೇತ್ರದ ಜನತೆಗೆ ಮನವರಿಕೆ ಮಾಡಿದರು.ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ. ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಮಾತನಾಡಿ. ಲೋಕಸಭಾ ಚುನಾವಣೆಯ ಅಭ್ಯರ್ಥಿ ಈ. ತುಕಾರಾಮ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ನಾವೆಲ್ಲರೂ ಗೆಲ್ಲಿಸಬೇಕು ಈ. ತುಕಾರಾಮ್ ಅವರ ಗುರುತು ಹಸ್ತಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ತುಕಾರಾಮ್ ಪತ್ನಿ ಅನ್ನಪೂರ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ನಾಗಮಣಿ ಜಿಂಕಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು. ಊರಿನ ಮುಖಂಡರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.