ದೇಶವನ್ನು ಅಧೋಗತಿಗೆ ತಂದಿರುವ ಬಿಜೆಪಿ ಕೇಂದ್ರ ಸರ್ಕಾರ – ಸಚಿವ ಬಿ. ನಾಗೇಂದ್ರ.
ಕಾನಾ ಹೊಸಹಳ್ಳಿ ಮೇ.02

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈ ಪಕ್ಷದ ಅಭ್ಯರ್ಥಿ ಈ. ತುಕಾರಾಂ ಪರವಾಗಿ ಜಿಲ್ಲಾ ಸಚಿವ ಬಿ.ನಾಗೇಂದ್ರ ಅವರ ಹಾಗೂ ಕೂಡ್ಲಿಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಕ್ಷೇತ್ರ ವ್ಯಾಪ್ತಿಯ ಕಾನ ಹೊಸಹಳ್ಳಿ ಪಟ್ಟಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ನಂತರ ಪಟ್ಟಣದ ಮುಖ್ಯ ರಸ್ತೆ ಹಿರಂಗ ಪ್ರಚಾರ ಮತ್ತು ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ಮಾಡಿದರು. ಇದೇ ವೇಳೆ ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ, ನಾನು ಕೂಡ್ಲಿಗಿ ಕ್ಷೇತ್ರದ ಜನರ ಆಶೀರ್ವಾದ ದಿಂದ ನಾನು 2008 ಹಾಗೂ 2013 ರಲ್ಲಿ ಎರಡು ಬಾರಿ ಗೆದ್ದು ಶಾಸಕನಾಗಿ, ಕೂಡ್ಲಿಗಿ ಕ್ಷೇತ್ರದ ಜನರ ಆಶೀರ್ವಾದ ದಿಂದ ಈಗ ಬಳ್ಳಾರಿ ಕ್ಷೇತ್ರದಲ್ಲಿ ಗೆದ್ದು ಮಂತ್ರಿಯಾಗಿದ್ದೇನೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ಗ್ಯಾರೆಂಟಿ ಯೋಜನೆಯ ಹಣ ದೊರೆಯಲಿದೆ. ವಿಧಾನ ಸಭಾ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಪಂಚ ಗ್ಯಾರೆಂಟಿಗಳನ್ನ ನೀಡುವ ಮೂಲಕ ಮಹಿಳೆಯರು, ಬಡವರು, ದೀನ ದಲಿತರ ಧ್ವನಿ ಯಾಗಿದ್ದೇವೆ. ನಮ್ಮ ದೇಶವನ್ನು ಅಧೋಗತಿಗೆ ತಂದಿರುವ ಬಿಜೆಪಿ ಪಕ್ಷಕ್ಕೆ ಮತವನ್ನು ಕೊಡಬಾರದು. ಅಧರ್ಮ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಕೊಟ್ಟ ಮಾತಂತೆ ನಡೆದು ಕೊಂಡ ವ್ಯಕ್ತಿ ಯಾರಾದ್ರು ಇದ್ರೆ ಅದು ನಮ್ಮ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಮಾತ್ರ ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ಜನರು ಬರುತ್ತಾರೆ ಅವರ ಆಮಿಷಕ್ಕೆ ಬಲಿಯಾಗದೆ. ಈ ಬಾರಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಈ. ತುಕಾರಾಂ ಅವರು ಸೋಲಿಲ್ಲದ ಸರದಾರರು, ನಾಲ್ಕು ಬಾರಿ ಶಾಸಕರಾಗಿ, ಯಾವುದೇ ಕಳಂಕ ವಿಲ್ಲದಂತಹ ಸಂಸತ್ತಿನಲ್ಲಿ ಬಳ್ಳಾರಿ ಜಿಲ್ಲೆಯ ಜನರ ಪರ ಧ್ವನಿಯಾಗುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಬಹುಮತ ದಿಂದ ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದರು.

ಈ ವೇಳೆ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಎ ನ್ ಟಿ ಶ್ರೀನಿವಾಸ್ ಮಾತನಾಡಿ ನನ್ನ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳ ಮೂಲಕ ಲೋಕಸಭಾ ಚುನಾವಣೆ ಅಭ್ಯರ್ಥಿ ಈ. ತುಕರಾಮ್ ಅವರನ್ನು ಲೋಕಸಭಾ ಸದಸ್ಯರನ್ನಾಗಿ ನಾವೆಲ್ಲರೂ ಸೇರಿ ಅವರನ್ನು ಆಯ್ಕೆ ಮಾಡಿ ಕಳಿಸಬೇಕು. ನಮ್ಮ ಅಖಂಡ ಜಿಲ್ಲೆಯ ಪರವಾಗಿ ಧ್ವನಿ ಯೆತ್ತುವುದಕ್ಕೆ ನಮ್ಮ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಅಂತರ ಕೊಡಬೇಕು ಎಂದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರದ ನಮ್ಮ ಸರ್ಕಾರ ಜನ ಪರವಾದಂತಹ ಸರ್ಕಾರ. ಅದಕ್ಕೆ ಈ ಬಾರಿ ನಮ್ಮ ಕ್ಷೇತ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಲೋಕಸಭಾ ಚುನಾವಣೆ ಅಭ್ಯರ್ಥಿಯಾದ, ಈ. ತುಕಾರಾಮ್ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡ ಬೇಕೆಂದು ಕ್ಷೇತ್ರದ ಜನತೆಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಗೌಡ್ರು, ಕಾಂಗ್ರೆಸ್ ಹಿರಿಯ ಮುಖಂಡ ವೆಂಕಟೇಶ್, ಎನ್ ಟಿ ತಮ್ಮಣ್ಣ, ನಾಗಮಣಿ ಜಿಂಕಲ್, ಸಚಿವರ ಸೋದರ ವೆಂಕಟ್ ಪ್ರಸಾದ್, ಜಿ ಓಬಣ್ಣ, ಕಾವಲಿ ಶಿವಪ್ಪ ನಾಯಕ, ರಫಿಕ್ ಚನ್ನಬಸಪ್ಪ, ಎರ್ರಿಸ್ವಾಮಿ, ಕಾನಮಡುಗು ಜೆ ಈ ಶರಣಪ್ಪ . ಮುರಳಿ ಕೃಷ್ಣ, ಇಮಾಮ್ ಸಾಬ್, ಎಸಿ ಚೇತನ್ ಗ್ರಾ.ಪಂ ಅಧ್ಯಕ್ಷ, ಎಳೆನೀರು ಗಂಗಣ್ಣ, ದುರ್ಗೇಶ್ ಬಿಟಿ ಗುದ್ದಿ, ಜಗದೀಶ್, ಗಬ್ಬರ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್, ಸೂರ್ಯಪ್ರಕಾಶ್, ಫೋಟೋ ಸಿದ್ದಲಿಂಗಪ್ಪ, ವೈ ಎಂ ವೀರೇಶ್ವರಯ್ಯ, ಮಂಜುನಾಥ ಬಿ. ಕಾನಮಡುಗು. ಅರುಣ್ ಕುಮಾರ್ ಹೊಸಮನೆ .ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮನೋಜ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇತರರು ಇದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.