“ಹುಕ್ಕೇರಿ ಕ್ಷೇತ್ರದಲ್ಲಿ ಮೊಳಗಿದ ಕೇಸರಿ ರಣಕಹಳೆ”.

ಹುಕ್ಕೇರಿ ಮೇ.03

ಲೋಕಸಭಾ ಚುನಾವಣೆ ಅಂಗವಾಗಿ ಹುಕ್ಕೇರಿ ಪಟ್ಟಣದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ ಶಹಾಜಿ ಅವರ ನೇತೃತ್ವದಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆಜಿ ಯವರು ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿಜಿ ಅವರು ಮತ್ತು ಗೃಹ ಸಚಿವರಾದ ಅಮಿತ್ ಶಹಾಜಿ ಅವರು ನಮ್ಮ ಬಿಜೆಪಿ ಪಕ್ಷದ ಕಣ್ಣು ಮತ್ತು ಮೆದುಳಿನಂತೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ನರೇಂದ್ರ ಮೋದಿಜಿಯವರ ಕಣ್ಣು ನೋಡುತ್ತಿದ್ದರೆ, ಬಿಜೆಪಿ ಪಕ್ಷದ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ಅಮಿತ್ ಶಹಾ ಅವರ ಮೆದುಳು ಮುಂಚೂಣಿಯಲ್ಲಿರುತ್ತದೆ. ಈ ದೇಶದ ಬೆಳವಣಿಗೆಗೆ ಹಾಗು ದೇಶವಾಸಿಗಳ ರಕ್ಷಣೆಗೆ ಈ ಇಬ್ಬರು ನಾಯಕರು ತಮ್ಮ ಸರ್ವಸ್ವವನ್ನೂ ತ್ಯಜಿಸಿದ್ದಾರೆ.

ಇಂದು ರಾಜಕೀಯ ಚಾಣಾಕ್ಷ ಶ್ರೀ ಅಮಿತ್ ಶಹಾಜಿ ಅವರು ಚಿಕ್ಕೋಡಿ ಕ್ಷೇತ್ರಕ್ಕೆ ಬಂದು ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಪ್ರಚಾರ ಕೈಗೊಂಡಿದ್ದು ಕ್ಷೇತ್ರದ ನಮ್ಮ ಕಾರ್ಯಕರ್ತರಿಗೆ ಸಹಸ್ರ ಬಲ ಬಂದಂತಾಗಿದೆ.ಈ ಸಂದರ್ಭದಲ್ಲಿ ಶ್ರೀ ಈರಣ್ಣ ಕಡಾಡಿ, ಶ್ರೀ ರಮೇಶ ಕತ್ತಿ, ಶ್ರೀ ನಿಖಿಲ ಕತ್ತಿ, ಶ್ರೀ ದುರ್ಯೋಧನ ಐಹೊಳೆ, ಮಹಾಂತೇಶ ಕವಟಗಿಮಠ,ಶ್ರೀ ವಿವೇಕರಾವ ಪಾಟೀಲ,ಶ್ರೀ ಪಿ.ಎಚ್.ಪೂಜಾರ,ಶ್ರೀ ಬಸವರಾಜ ಹುಂದ್ರಿ, ಶ್ರೀ ಮಾರುತಿ ಅಷ್ಟಗಿ,ಪಕ್ಷದ ಪ್ರಮುಖರು ನಾಯಕರು, ಪದಾಧಿಕಾರಿಗಳು,ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಂ.ಎಂ. ಶರ್ಮಾ ಬೆಳಗಾವಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button