ಪತ್ರಕರ್ತ ಗೌರಿಹಳ್ಳಿ ಮಂಜುನಾಥ್ ಇನ್ನಿಲ್ಲ.
ಗೌರಿಹಳ್ಳಿ ಮೇ.04

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ “ಇದ್ದದ್ದು ಇದ್ದಂಗೆ” ಪತ್ರಿಕೆಯ ಸಂಪಾದಕರಾದ ಗೌರಿಹಳ್ಳಿ ಮಂಜುನಾಥ್ ದಿನಾಂಕ 4 ಮೇ 2024 ರಂದು ಬೆಳಿಗ್ಗೆ ಜಾವ ಅನಾರೋಗ್ಯ ದಿಂದ ಬಳಲುತ್ತಿದ್ದು ಇಂದು ಸಾವನ್ನಪ್ಪಿದ್ದಾರೆ. ಇವರ ಅಂತ್ಯಕ್ರಿಯೆ ಗೌರಿಹಳ್ಳಿ ಗ್ರಾಮದಲ್ಲಿ ನೆರವೇರಲಿದೆ. ಗೌರಿಹಳ್ಳಿ ಮಂಜುನಾಥ್ ರವರ ಹೆಂಡತಿ ಮಕ್ಕಳು ಮೊಮ್ಮಕ್ಕಳಿಗೂ ಹಾಗೂ ಇವರ ಕುಟುಂಬದವರಿಗೂ ಈ ಸಾವಿನ ದುಃಖವನ್ನು ಬರಿಸುವ ಶಕ್ತಿ ನೀಡಲಿ ಎಂದು ಕೋರುವವರು ಕೊಟ್ಟೂರು ಹರಪನಹಳ್ಳಿ ಸಂಡೂರು ಹಡಗಲಿ ಇನ್ನೂ ಮುಂತಾದ ಅಪಾರ ಸ್ನೇಹ ಬಳಗ ಬಾಂಧವರು ಮತ್ತು ಸಂಘಟನಕಾರರು ಸಮಾಜದ ಮುಖಂಡರು ಗ್ರಾಮಸ್ಥರು ಇನ್ನೂ ಮುಂತಾದವರು.ಸಾವು ಎಂದರೆ ಜೀವಿಯ ಕೊನೆಯಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು. ಜನನದಂತೆ ಮರಣವೂ ನಿಸರ್ಗ ಪ್ರೇರಿತ. ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ.ಜೀವನ ಮತ್ತು ಮರಣ ಎನ್ನುವುದು ಅಂತ್ಯವಿಲ್ಲದ ಚಕ್ರ. ಜೀವನದ ಅಂತ್ಯವೇ ಮರಣ. ಮರಣ ಎನ್ನುವುದು ಹೀಗೆ ಇರುತ್ತದೆ ಅಥವಾ ಇಂದೇ ಬರುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ನಮಗೆ ಅರಿವಿಲ್ಲದೆ ಬರುವ ಸಾವು ಹೇಗೇ ಬಂದರೂ ಸ್ವೀಕರಿಸಲೇ ಬೇಕು. ಸಾವನ್ನು ತಡೆದು ನಿಲ್ಲಿಸುವ ಶಕ್ತಿ ಯಾರಲ್ಲೂ ಇಲ್ಲ. ವ್ಯಕ್ತಿ ಹೇಗೇ ಇದ್ದರೂ, ಏನೇ ಮಾಡಿದ್ದರೂ ಒಂದಲ್ಲಾ ಒಂದು ದಿನ ಸಾವಿಗೆ ಶರಣಾಗಲೇ ಬೇಕು.ಗೌರಿಹಳ್ಳಿ ಮಂಜುನಾಥ ಯಾರಿಗೆ ಗೊತ್ತಿಲ್ಲ ಹೇಳಿ, ನಮಗೆ ಪತ್ರಿಕೆ ಎಂದರೆ ಏನು? ಪತ್ರಿಕೆಯ ಪರಿಚಯ ಮಾಡಿ ಕೊಟ್ಟ ವ್ಯಕ್ತಿ. ಪತ್ರಕರ್ತರ ಜೀವನದ ಬಗ್ಗೆ ಅರಿತ್ತೀರುವ ವ್ಯಕ್ತಿ. ಇವರು ವಿಜಯನಗರ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಪತ್ರಿಕೆಯ ದಾಪುಗಾಲು ಮೂಡಿಸಿರುವ ವ್ಯಕ್ತಿ, ಪತ್ರಿಕಾ ರಂಗದಲ್ಲಿ ಸಾಕಷ್ಟು ಬೆಳವಣಿಗೆ ಕಂಡವರು. ಪತ್ರಿಕೆ ರಂಗದಲ್ಲಿ ಇವರ ಅನೇಕ ಜನ ಶಿಷ್ಯಂದಿರನ್ನು ಹುಟ್ಟು ಹಾಕಿದ್ದಾರೆ. ಇಂತಹ ವ್ಯಕ್ತಿನ್ನು ಆ ದೇವರು ಸಹಿಸದೇ. ಇಂತಹ ಅಪರೂಪದ “ಮರೆಯದ ಮಾಣಿಕ್ಯ” ನಮ್ಮ ನಿಮ್ಮೆಲ್ಲರನ್ನು ಬಿಟ್ಟು ಮರೆಯಾಗಿ ಹೋಗಿರುವದು ಬಹಳ ವಿಷಾದನೀಯ.ಇವರ ಆತ್ಮಕ್ಕೆ ಶಾಂತಿ ಕೊಟ್ಟು, ಇವರ ಕುಟುಂಬಕ್ಕೆ ದುಃಖ ತಡೆದು ಕೊಳ್ಳುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.