ಸ್ವಯಂ ಪ್ರೇರಿತವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ – ಮತದಾನ ಪ್ರಮಾಣ ಹೆಚ್ಚಿಸಿ.
ಹುನಗುಂದ ಮೇ.04

ಮತವನ್ನು ಹಣ ಮತ್ತು ಹೆಂಡ ಹಾಗೂ ಯಾವುದೇ ಆಶೆ ಆಮೀಷಗಳಿಗೆ ಒಳಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡದೇ, ಪ್ರಜೆಗಳ ಹಿತ ಕಾಪಾಡುವ ಮತ್ತು ಬಲಿಷ್ಠ ಭಾರತ ಕಟ್ಟುವ ಹಾಗೂ ಅಭಿವೃದ್ದಿ ಪರ ಚಿಂತನೆಯುಳ್ಳ ನಾಯಕರನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಸರ್ವ ಮತದಾರ ಕೈಯಲ್ಲಿದೆ ಎಂದು ಜಿಲ್ಲಾ ಸಂಚಾರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎ. ಮೂಲಿಮನಿ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕಸಭೆ ಚುನಾವಣಾ ಸ್ವೀಪ್ ತಂಡ,ನ್ಯಾಯಾAಗ ಇಲಾಖೆ,ಕಾನೂನು ಸೇವಾ ಪ್ರಾಧಿಕಾರ,ಪುರಸಭೆ,ವಕೀಲರ ಸಂಘ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಕಲ್ಯಾಣ ಇಲಾಖೆ, ಕಾಲೇಜ ವಿದ್ಯಾರ್ಥಿಗಳು ಮತ್ತು ಪಂಚಾಯತಿಗಳ ಎಂಆರ್ಡಬ್ಲು, ಪಿಆರ್ಡಬ್ಲು ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಜಾಥಾಕ್ಕೆ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವಾಗ ಒಳ್ಳೆಯ ಮನೆತನದ, ಒಳ್ಳೆಯ ಹುದ್ದೆಯಲ್ಲಿರುವ ಹುಡಗನನ್ನು ನೋಡಿ ಯಾವ ರೀತಿ ಮದುವೆ ಮಾಡಿ ಕೊಡ್ತೀರೋ ಹಾಗೆ ಬಡವರ ಪರ ಕಾಳಜಿಯುಳ್ಳ, ದೇಶದ ಪ್ರಜೆಗಳ ಸಂರಕ್ಷಣೆ ಮಾಡುವ ಅಭಿವೃದ್ದಿ ಬಗ್ಗೆ ಸದಾ ಕಳಕಳಿಯುಳ್ಳ ವ್ಯಕ್ತಿಗೆ ಪವಿತ್ರವಾದ ಮತದಾನ ಮಾಡಬೇಕು ಮತ್ತು ಮತದಾನದ ದಿನದಂದು ಭವ್ಯ ಭಾರತ ಭವಿಷ್ಯಕ್ಕಾಗಿ ಸ್ವಯಂ ಪ್ರೇರಿತವಾಗಿ ಮನೆಯಿಂದ ಮತಗಟ್ಟೆಗೆ ನೀವು ಬಂದು ನಿಮ್ಮವರನ್ನು ಕರೆ ತಂದು ಮತದಾನ ಮಾಡಿ ಎಂದರು.

ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶರಾದ ಹನಮಂತರಾವ್ ಕುಲಕರ್ಣಿ ಮಾತನಾಡಿ ದೇಶದ ಸುಭದ್ರತೆಗೆ ಮತ್ತು ಸಾರ್ವಜನಿಕರ ಹಿತರಕ್ಷಣೆ ಕಾಪಾಡಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿ ಪಥದತ್ತ ಸಾಗಿಸುವ ವ್ಯಕ್ತಿಗೆ ಮತ ನೀಡಿ ದೇಶದ ಅಭಿವೃದ್ದಿಗೆ ಸಾಕ್ಷಿಯಾಗಿ ಪ್ರಜಾಪ್ರಭುತ್ವನ್ನು ಎತ್ತಿಹಿಡಿಯಬೇಕೆಂದರು. ಮತದಾನ ಜಾಗೃತಿ ಜಾಥಾವು ನಗರದ ನ್ಯಾಯಾಲಯದ ಆವರಣದಿಂದ ಚನ್ನಮ್ಮ ವೃತ್ತ, ವಿಮ ವೃತ್ತ ತಲುಪಿ ಮಾನವ ಸರಪಳಿ ನಿರ್ಮಿಸಿ ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸು ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮತಕ್ಷೇತ್ರದ ಉಪ ಚುನಾವಣಾಧಿಕಾರಿ ಶ್ರೀಧರ ಗೊಟೂರ,ಸ್ವೀಪ್ ಸಮಿತಿ ಅಧ್ಯಕ್ಷೆ ತಾರಾ,ತಾಪಂ ಇ.ಒ ಮುರಳೀಧರ ದೇಶಪಾಂಡೆ, ವಕೀಲ ಸಂಘದ ಅಧ್ಯಕ್ಷರಾದ ಪ್ರಕಾಶ ಕಠಾಣಿ,ಬಿ.ಎ. ಆವಟಿ, ಸಿಪಿಐ ಸುನೀಲ ಸವದಿ, ಪಿಎಸೈ ಲಕ್ಕಪ್ಪ ಜೋಡಟಿ, ಹಿಂದುಳಿದ ಸಮಾಜ ಕಲ್ಯಾಣ ಇಲಾಖೆಯ ಸಂಗಮೇಶ ಗಡೇದ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ವಕೀಲರಾದ ಸಿ.ಬಿ. ಸಜ್ಜನ, ಮಾಧವ ದೇಶಪಾಂಡೆ,ವ್ಹಿ.ಬಿ. ದಮ್ಮೂರಮಠ, ಪುರಸಭೆ ಸಿಬ್ಬಂದಿ ಮಹಾಂತೇಶ ತಾರಿವಾಳ, ರವಿ ಹುಣಶ್ಯಾಳ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂಬಂಡಲಗಲ್ಲ ಹುನಗುಂದ.