ಅನುಮಾನಾಸ್ಪದ ವ್ಯಕ್ತಿ ಸಾವು.
ತರೀಕೆರೆ ಮೇ.12
![](https://i0.wp.com/sknewskannada.in/wp-content/uploads/2024/05/IMG-20240512-WA00361.jpg?resize=708%2C472&ssl=1)
ತಾಲೂಕಿನ ಹಲಸೂರು ವಾಸಿಯಾದ ಗಾರೆ ಕೆಲಸ ಮಾಡುವ 46 ವರ್ಷ ವಯಸ್ಸಿನವರನ್ನು ದಿನಾಂಕ 10-.05.-2024 ರಂದು ರಂಗೆನಹಳ್ಳಿ ವಾಸಿಯಾದ ಗಾರೆ ಮೇಸ್ತ್ರಿ ಸೋಮಣ್ಣ ಎಂಬುವರು ಕೆಲಸಕ್ಕೆ ಕರೆದುಕೊಂಡು ಹೋಗಿದ್ದು ಶುಕ್ರವಾರ ರಾತ್ರಿ ಸುಮಾರು 9:30 ಸಮಯದಲ್ಲಿ ಚಂದ್ರಶೇಖರನ ಮೃತ ದೇಹವನ್ನು ಒಮಿನಿ ಕಾರಿನಲ್ಲಿ ತಂದಿರುತ್ತಾರೆ, ಮೃತ ಚಂದ್ರಶೇಖರನ ದೇಹದ ಮೇಲೆ ಗಾಯದ ಗುರುತುಗಳು ಕಾಣುತ್ತಿದ್ದು, ಈ ಕುರಿತು ಅಮೃತರ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದು, ಪೋಲಿಸ್ ಉಪ ನಿರೀಕ್ಷಕರು ಮರಣೋತ್ತರ ಪರೀಕ್ಷೆಯಿಂದ ನಿಖರವಾದ ಮಾಹಿತಿ ಸಿಗುತ್ತದೆ ಎಂದು ಪತ್ರಿಕೆಗೆ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ. ಚಿಕ್ಕ ಮಗಳೂರು.