ರಕ್ತದ ದಾನ ಶ್ರೇಷ್ಠ ದಾನ – ಶಿವಪುತ್ರ ಶ್ರೀಗಳು.

ಇಂಡಿ ಮೇ.14

ರಕ್ತ ದಾನ ಶ್ರೇಷ್ಠ ದಾನ. ಅದರಲ್ಲಿ ಯುವ ಜನತೆಯ ಪಾತ್ರ ಹೆಚ್ಚಿದೆ. ಇಂದು ಎಲ್ಲೆಡೆ ರಕ್ತದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ರಕ್ತದಾನಿಗಳ ಅಗತ್ಯವು ಹೆಚ್ಚಿದೆ ಎಂದು ರೋಡಗಿಯ ಅಭಿನವ ಶಿವಪುತ್ರ ಸ್ವಾಮಿಗಳು ಹೇಳಿದರು.ಇಂಡಿ ತಾಲೂಕಿನ ರೋಡಗಿ ಗ್ರಾಮದಲ್ಲಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶಿವಲಿಂಗೇಶ್ವರ ಸ್ವಾಮಿಗಳ 13 ನೇ. ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಅಪಘಾತಕ್ಕೀಡಾದವರಿಗೆ ಮತ್ತು ಹೆರಿಗೆ ಸಂದರ್ಭದಲ್ಲಿ ರಕ್ತದ ಕೊರತೆ ಯಿಂದ ಹೋಗುವ ಜೀವಗಳನ್ನ ಉಳಿಸಲು ರಕ್ತದಾನ ಮಾಡುವದು ಅತಿ ಅವಶ್ಯ ಎಂದರು.ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. 450 ಜನರಿಗೆ ನೇತ್ರ ತಪಾಸಣೆ, 25 ಜನರಿಗೆ ಶಸ್ತ್ರ ಚಿಕಿತ್ಸೆ,12 ಜನರಿಗೆ ಕಣ್ಣು ಪೊರೆ ತೆಗೆಯುವುದು ಸೇರಿದಂತೆ 32 ಜನ ರಕ್ತದಾನ ಮಾಡಿದರು.ಈ ಶಿಬಿರದಲ್ಲಿ ಡಾ. ಅನೀಲ ರಾಠೋಡ, ಸಂಗಮೇಶ ಕಡಿಬಾಗ, ಆರೀಫ್ ಇನಾಮದಾರ, ಅರುಣ ಕಾಂಬಳೆ, ಪ್ರಕಾಶ ಕವಲಗಿ, ರುದ್ರಗೌಡ ಅಲಬಗೊಂಡ, ಪ್ರಶಾಂತ ಅಲಗೊಂಡ, ಶಂಕರಗೌಡ ಬಂಡಿ, ಸಂತೋಷ ಪಾಟೀಲ ಮತ್ತಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button