ಸಾರ್ವಜನಿಕರ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೊದಲ ಕೊಂಡಿಯೇ ದಾದಿಯರು – ಡಾ, ಮಂಜುನಾಥ.

ಹುನಗುಂದ ಮೇ.24

ಸಾರ್ವಜನಿಕರ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯ ನಡುವಿನ ಮೊದಲ ಕೊಂಡಿಯಾಗಿ ಪ್ರಮಾಣಿಕ ಕಾರ್ಯ ನಿರ್ವಹಿಸುವ ದಾದಿಯರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ.ಮಂಜುನಾಥ ಅಂಕೋಲ್ಕರ ಹೇಳಿದರು. ಪಟ್ಟಣದ ಗೌರಮ್ಮ ಚರಂತಿಮಠ ವಿಜ್ಞಾನ ಮತ್ತು ನರ್ಸಿಂಗ್ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,೧೮೫೪ ರಲ್ಲಿ ರಷ್ಯಾ ಮತ್ತು ಬ್ರಿಟನ್ ನಡುವೆ ನಡೆದ ಯುದ್ದದಲ್ಲಿ ಗಾಯಗೊಂಡ ಸೈನಿಕರನ್ನು ರಾತ್ರಿ ಹೊತ್ತಿನಲ್ಲಿ ದೀಪವನ್ನು ಹಿಡಿದು ಕೊಂಡು ಆರೈಕೆ ಮಾಡಿದ ಫ್ಲೊರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವನ್ನು ವಿಶ್ವ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮಾತೃ ಹೃದಯ ದಿಂದ ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರು ಸಲ್ಲಿಸುತ್ತಿರುವ ಸೇವೆಗೆ ಮತ್ತೊಂದು ಸಾಟಿ ಇಲ್ಲ.

ತಾಯಿ ಗರ್ಭದಿಂದ ಜನ್ಮ ತಾಳುವುದು ಒಂದೆಡೆಯಾದರೆ ವೈದ್ಯಕೀಯ ಕ್ಷೇತ್ರದಿಂದ ಮತ್ತೊಮ್ಮೆ ಜನಿಸಿದಂತೆ, ವಿಜ್ಞಾನ ತಂತ್ರಜ್ಞಾನದ ನಾಗಾಲೋಟದಲ್ಲಿ ಸಮಸ್ಯೆಗೆ ಪರಿಹಾರ ಒಂದೆಡೆ ಇದ್ದರೆ ವೈದ್ಯಕೀಯ ಕ್ಷೇತ್ರದ ಸಾಕಷ್ಟು ಸಂಕಷ್ಟ ಸ್ಥಿತಿಯ ಯಶಸ್ಸಿಗೆ ದಾದಿಯರ ಪಾತ್ರ ಮಹತ್ವದ್ದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಸಾಧನೆಯ ಮೆಟ್ಟಿಲಾಗಿದ್ದಾರೆ ಎಂದರು.ವಿ.ಮ.ಸಂಘದ ನಿರ್ದೇಶಕ ಅರುಣೋದಯ ದುದ್ಗಿ ಮಾತನಾಡಿ ಸಧ್ಯದ ಸ್ಥಿತಿಯಲ್ಲಿ ದಿನೆ ದಿನೇ ಎಚ್ಚುತ್ತಿರುವ ಹಲವಾರು ಬಗೆಯ ಕಾಯಲೆಗಳಿಂದ ಬಳಲುತ್ತಿರುವವರಿಗೆ ಬಂಧುಗಳೆ ದೂರವಿರುವ ಸ್ಥಿತಿ ಬಂದಾಗ ಈ ಕ್ಷೇತ್ರದ ದಾದಿಯರ ಸೇವೆ ಸ್ಮರಣೀಯ, ಆದರೆ ಎಲ್ಲದಕ್ಕೂ ಕೀಳರಿಮೆಯನ್ನು ಲೆಕ್ಕಿಸದೇ ಸಲ್ಲಿಸುತ್ತಿರುವ ಅವರ ಸೇವೆ ಅಮೋಘವಾದುದು. ತಮ್ಮ ಸೇವೆಯ ಜೊತೆಗೆ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ಅಷ್ಟೆ ಗಮನ ಹರಿಸುವುದು ಮುಖ್ಯ ಎಂದರು.ಮಹಾ ವಿದ್ಯಾಲಯದ ಪ್ರಚಾರ್ಯ ಸಂಗಮೇಶ ಪಟ್ಟಣಶಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ದಾದಿಯರು ವಿಶ್ವಕ್ಕೆ ಬೆಳಕು ತೋರುವ ದೀಪಗಳು. ನರ್ಸಿಂಗ್ ಕೇವಲ ವೃತ್ತಿನ್ನಾಗಿಸಿಕೊಳ್ಳದೆ ಅದೊಂದು ಧರ್ಮದ ಕೆಲಸವೆಂದು ಪಾಲಿಸಿ ಜನರ ಆರೋಗ್ಯ ಕಾಪಾಡುವಲ್ಲಿ ನೀವು ಆಶಾಕಿರಣ ವಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಸವರಾಜ ಕೆಂದೂರ ಮಾತನಾಡಿದರು. ವೀರಣ್ಣ ಬಳೂಟಗಿ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.    

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button