ಇತ್ತೀಚೆಗೆ ಸಿಡಿಲು ಬಡಿದ ವ್ಯಕ್ತಿಗೆ ಸರ್ಕಾರ ದಿಂದ ಹಣ ಮಂಜೂರು ಮಾಡಿಸಿ ಚೆಕ್ ವಿತರಿಸಿದ ಶಾಸಕರು.
ಮೇಲಿನ ಕಣಿವೆ ಮೇ.24

ಇತ್ತೀಚಿಗೆ ಮೊಳಕಾಲ್ಮೂರು ತಾಲೂಕು ಮೇಲಿನ ಕಣಿವೆ ಗ್ರಾಮದಲ್ಲಿ ಸಿಡಿಲು ಬಡಿದು ನಿಂಗರಾಜು ಅವರು ಮೃತಪಟ್ಟಿದ್ದು ಇಂದು ಶಾಸಕರ ರಾಂಪುರ ನಿವಾಸದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣರವರು ಸರ್ಕಾರದಿಂದ ಮಂಜೂರು ಆಗಿರುವ ಪರಿಹಾರದ ₹5.ಲಕ್ಷದ ಚೆಕ್ ನ್ನು ವಿತರಿಸಿ ಬಡ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದರು.

ಮಾನ್ಯ ಶಾಸಕರು ಬಡವರಿಗೆ ಪ್ರವಾಹ ವಿಕೋಪದಲ್ಲಿ ಸಿಡಿಲು ಬಡಿದು ವ್ಯಕ್ತಿಗೆ ಸರ್ಕಾರದಿಂದ ಬರ್ತಕ್ಕಂತ ಯಾವುದೇ ಯೋಜನೆ ಆಗಿರಲಿ ನೇರವಾಗಿ ಅವರ ಅಕೌಂಟಿಗೆ ಮತ್ತು ಅವರ ಹೆಸರಿಗೆ ಚೆಕ್ಕು ವಿತರಿಸುವ ಶಾಸಕರು ಎಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಬಿಟ್ಟರೆ ಮತ್ಯಾವ ಶಾಸಕರು ಈ ರೀತಿ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಸಿಡಿಲು ಬಡಿದ ವ್ಯಕ್ತಿಗೆ ಒಂದು ರೂಪಾಯಿ ಬೇರೆಯವರು ಬಳಸದೆ ನೇರವಾಗಿ ಫಲಾನುಭವಿಗೆ ಸಿಗಲು ಅವಕಾಶ ಮಾಡಿ ಕೊಡುವ ಶಾಸಕರು ನಿಜವಾಗಲೂ ಇವರು ಹೇಳಬೇಕಂದರೆ ದೇವರು ಅಂತ ತಿಳಿಯಬೇಕು ಇಂತಹ ಘಟನೆ ಆಗಿರತಕ್ಕಂತ ಅನುದಾನವನ್ನು ಬೇರೆಯವರು ನುಂಗಿ ನೀರು ಕುಡಿದು ಬಿಡುತ್ತಾರೆ ಬ್ರೋಕರ್ ಮೂಲಕ ಅಧಿಕಾರಿಗಳ ನಿರ್ಲಕ್ಷವೋ ಅಂತ ತಿಳಿಯ ಬೇಕಾಗಿರುತ್ತಿತ್ತು. ಆದರೆ ಇಂಥ ಎನ್ ವೈ ಗೋಪಾಲಕೃಷ್ಣಂತ ಶಾಸಕರು ಕ್ಷೇತ್ರದಲ್ಲಿ ಸಿಗಬೇಕಾದರೆ ಎಲ್ಲಾ ಜನಸಾಮಾನ್ಯರು ಪುಣ್ಯವು ಪಡೆದಿರಬೇಕು ದೇವರು ಇಂಥ ಒಳ್ಳೆಯ ಶಾಸಕರಿಗೆ ರಾಜ್ಯದಲ್ಲಿ ದೊಡ್ಡ ಮಂತ್ರಿ ಸ್ಥಾನ ದೊರೆಯ ಬೇಕಾಗಿತ್ತು ಈ ಸಂದರ್ಭದಲ್ಲಿ ತಾಲೂಕಾ ಆಡಳಿತ, ಕಂದಾಯ ಇಲಾಖೆ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ತಿಪ್ಪೇಸ್ವಾಮಿ. ಹೊಂಬಾಳೆ. ಮೊಳಕಾಲ್ಮುರು.