“ರುದ್ರಾಭಿಷೇಕಂ” ಚಲನ ಚಿತ್ರಕ್ಕೆ ಮುಹೂರ್ತ.
ಬೆಂಗಳೂರು ಮೇ.25

ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರವರ ಪ್ರಥಮ ಕಾಣಿಕೆ “ರುದ್ರಾಭಿಷೇಕಂ” ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.ಬಿವಿಕೆ ಗ್ರೂಫ್ ನ ಕೃಷ್ಣಪ್ಪನವರು ಕ್ಲಾಪ್ ಮಾಡಿದರೆ ವಿಜಯಪುರದ ಬಸವಕಲ್ಯಾಣ ಮಠದ ಶ್ರೀ ಮಾದೇವ ಶ್ರೀಗಳು ಕ್ಯಾಮರಾ ಗುಂಡಿ ಒತ್ತುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೊಡ್ಡ ಬಳ್ಳಾಪುರದ ನಿರಂಜನ ಶ್ರೀಗಳು, ಸಿದ್ದ ಗಂಗಾಮಠದ ನಿರಂಜನ ಶ್ರೀಗಳು, ಚಲನ ಚಿತ್ರರಂಗದ ಗಣ್ಯರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ಪಾಲ್ಗೊಂಡು ಚಿತ್ರಕ್ಕೆ ಶುಭ ಕೋರಿದರು. ದಕ್ಷಿಣ ಭಾರತದ ಹೆಸರಾಂತ ಜನಪದ ಕಲೆಯನ್ನು ಒಳಗೊಂಡಿರುವ ಪ್ರಚಲಿತವಾಗಿರುವ ಕಥೆ ಇದು.ದೇವನಹಳ್ಳಿ ಸುತ್ತಮುತ್ತ, ನಂದಿಬೆಟ್ಟ, ಸಕಲೇಶಪುರ, ಮಲ್ಪೆಬೀಚ್ ಮೊದಲಾದ ಕಡೆ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಕೆ.ವಸಂತ್ ಕುಮಾರ್ ತಿಳಿಸಿದರು. ನಾಯಕ ನಟನಾಗಿ ಸನತ್, ಶ್ರೀದೇವಿ ಜೋಶಿ ನಾಯಕಿಯಾಗಿ, ಖಳನಾಯಕರುಗಳಾಗಿ ಬುಲೆಟ್ವಿನ್, ಮನು, ಮುಕುಂದ್, ವಿಜಯರಾಜ್ ಹಾಗೂ ವಿಶಿಷ್ಟ ಪಾತ್ರದಲ್ಲಿ ಖ್ಯಾತ ಜನಪದ ದಿಗ್ಗಜ ಗುರುರಾಜ್ ಹೊಸಕೋಟೆ ಇವರೊಂದಿಗೆ ಶಂಖನಾದ ಆಂಜಿನಪ್ಪ, ಬಿರಾದಾರ್, ಮಾಲತಿಶ್ರೀ, ಮಮತಾ, ಐಟಂ ಸಾಂಗ್ ನಾಯಕಿ ಎಂದೇ ಪ್ರಸಿದ್ಧಿ ವಾಗಿರುವ ಅಲೀಷಾ ಮೊದಲಾದವರು ಚಿತ್ರದಲ್ಲಿದ್ದಾರೆ. . ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್ , ವಿ.ಮನೋಹರ್ ಸಂಗೀತ ಚಿತ್ರಕ್ಕಿದ್ದು ಐದು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸುರೇಶ್ ಗುಟ್ಟಹಳ್ಳಿ ನೃತ್ಯ ಸಂಯೋಜನೆ, ಬಾಬುಖಾನ್ ಕಲಾ ನಿರ್ದೇಶನ, ಮೇಕಪ್ ರಾಜ್, ವಸ್ತ್ರಾಲಂಕಾರ ವಿಜಯಕುಮಾರ್, ಸಂಕಲನ ಮುತ್ತುರಾಜ್ ಟಿ, ಪಿ ಆರ್ ಓ ಡಾ. ಪ್ರಭು.ಗಂಜಿಹಾಳ,ಡಾ.ವೀರೇಶ್ ಹಂಡಿಗಿ, ಸಹ ನಿರ್ದೇಶನ ಕಾಳಿದಾಸ ಅವರದಿದ್ದು, ಸುಮಾರು ೨೫ ವರ್ಷಗಳ ಸಿನಿ ಪ್ರಯಾಣದಲ್ಲಿ ಹಲವಾರು ನಿರ್ದೇಶಕರುಗಳ ಜೊತೆ ಕಾರ್ಯ ನಿರ್ವಹಿಸಿದ ಕೆ ವಸಂತ್ ಕುಮಾರ್ ಅವರು ಮೊದಲಸಲ ಚಿತ್ರ ನಿರ್ದೇಶನಕ್ಕಿಳಿದು ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ, ವಕೀಲರಾದ ಎನ್ ಜಯರಾಮ್, ಬಿ.ಎ .ರಮೇಶ್, ಕೆ. ವೆಂಕಟೇಶ್, ಶಿವು,ಚಿದಾನಂದಮೂರ್ತಿ ಹಾಗೂ ಅವರ ಸ್ನೇಹಿತರುಗಳು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಐಟಂ ಸಾಂಗ್ ಬಹು ನಿರೀಕ್ಷೆಯಲ್ಲಿದ್ದು “ರುದ್ರಾಭಿಷೇಕಂ” ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಿ ತೆರೆಗೆ ತರುವ ಆಲೋಚನೆ ಚಿತ್ರ ತಂಡದ್ದಾಗಿದೆ.
*****
ವರದಿ-ಡಾಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬