ಗಿರೀಶ್ ರವರ ಹುಟ್ಟು ಕುರುಡುಗೆ ಚಿಕಿತ್ಸೆ ನೀಡಿದ – ನಾಟಿವೈದ್ಯ ರಾಜಭಕ್ಷಿ.

ಹೊಸಕೇರಿ ಮೇ.25

ಶನಿವಾರ ದಿನವಾದ ಇಂದು ಜಗಳೂರು ತಾಲೂಕಾ ಹೊಸಕೇರಿ ಗ್ರಾಮದ ಜಾತಮ್ಮ ಎಂಬುವರ ಮಗ ಗಿರೀಶ್ (29) ಹುಟ್ಟಿನಿಂದಲೇ ದೃಷ್ಟಿ ಹೀನನಾಗಿದ್ದಾನೆ ಇವನಿಗೆ ಸುಮಾರು 7 ನೇ ಬಾರಿ ಕಣ್ಣಿಗೆ ನಾಟಿ ಔಷಧಿ ಬಿಟ್ಟಿದ್ದರಿಂದ ಸ್ಪಲ್ಪ ದೊಡ್ಡ ಅಕ್ಷರಗಳ ಸುಳುವಿನ ದೃಷ್ಟಿ ಸಿಕ್ಕಿರುವುದು ತಾಯಿ ಜಾತಮ್ಮ ಮುಖದಲ್ಲಿ ಆತ್ಮವಿಶ್ವಾಸ ಜನರ ಆಸಕ್ತಿಯನ್ನು ಹೆಚ್ಚುವಂತೆ ಮಾಡಿದೆ. ಸಾರ್ ನಾನು ಹುಟ್ಟಿ 29 ವರ್ಷಗಳಾಯ್ತು ನನಗೆ ಎರಡು ಕಣ್ಣಿನ ದೃಷ್ಟಿಯಿಲ್ಲ ದೃಷ್ಟಿ ಸಲುವಾಗಿ ಹಲವು ಖಾಸಗಿ ಕಣ್ಣಿನ ಆಸ್ಪತ್ರೆಗಳನ್ನು ನನ್ನ ತಾಯಿ ನನ್ನನ್ನು ಎಲ್ಲಾ ಕಡೆ ಕರೆದು ಕೊಂಡು ಹೋಗಿ ತೋರಿಸಿದ್ದಾರೆ ಎಲ್ಲಾ ಡಾಕ್ಟರ್ ಹೇಳಿದ್ದು ಮಾತ್ರ ಒಂದೇ ಉತ್ತರ ನಿಮ್ಮ ಮಗನ ಕಣ್ಣಿನ ನರಗಳು ಶಕ್ತಿ ಕಳೆದು ಕೊಂಡಿವೆ ಹಾಗಾಗಿ ನಾವು ಎಷ್ಟೆ ಪ್ರಯತ್ನ ಪಟ್ಟರು ಕಣ್ಣಿನ ದೃಷ್ಟಿ ಬರುವುದಿಲ್ಲ ಎಂದಿದ್ದರು. ನಂತರ ರಾಣೆಬೆನ್ನೂರುನಲ್ಲಿ ಯಾರೋ ನಾಟಿವೈದ್ಯರು ಕಣ್ಣಿಗೆ ಔಷಧಿ ಬಿಡ್ತಾರಂತೆ ಇದರಿಂದ ನನ್ನ ಕಣ್ಣಿನ ದೃಷ್ಟಿ ಸರಿ ಆಗಬಹುದು ಎಂದು ಬೇರೆಯವರಿಂದ ಸುದ್ದಿ ತಿಳಿದು. ರಾಣೆಬೆನ್ನೂರಿಗೆ ನನ್ನ ತಾಯಿ ಎರಡು ಬಾರಿ ನನ್ನನ್ನು ಕರೆದು ಕೊಂಡು ಹೋಗಿ ಕಣ್ಣಿನ ದೃಷ್ಟಿ ತೋರಿಸಿದೆವು ದೃಷ್ಟಿ ಬರುವ ಭರವಸೆ ದೇವರ ಮೇಲೆ ಭಾರ ಹಾಕಿ ನಮ್ಮ ಪ್ರಯತ್ನ ಮಾಡೋಣ ಎಂದು ನಾಟಿವೈದ್ಯ ರಾಜಭಕ್ಷಿ ಹೇಳಿದರು.ನಾಟಿವೈದ್ಯ ರಾಜಭಕ್ಷಿ ಅವರಿಂದ ಇಲ್ಲಿಯವರೆಗೆ 7 ಬಾರಿ ಕಣ್ಣಿಗೆ ನಾಟಿ ಔಷಧಿ ಬಿಡಿಸಿ ಕೊಂಡಿದ್ದರಿಂದ ಈಗೀಗ ನನ್ನ ಕಣ್ಣಿನ ದೃಷ್ಟಿಯಲ್ಲಿ ದೊಡ್ಡ ಅಕ್ಷರದ ಸುಳಿವು ಸಿಗುತ್ತಿದೆ ಎಂದು ರೋಗಿ ಗಿರೀಶ್ ರವರು ತಮ್ಮ ಖುಷಿಯನ್ನು ವೈದ್ಯರೊಂದಿಗೆ ಹಂಚಿಕೊಂಡರು. ರಾಜಭಕ್ಷಿ ನಾಟಿವೈದ್ಯರು ಮಾತನಾಡಿ ನಾಟಿ ಔಷಧಿಯಿಂದ ಆರೋಗ್ಯಕ್ಕೆ ಹಾಗೂ ಕಣ್ಣುಗಳಿಗೆ ಯಾವುದೇ ಅನ್ಯ ತೊಂದರೆಗಳಿಗೆ ಕಾರಣವಾಗುವುದಿಲ್ಲ , ಸುಗರ್, ಬಿ.ಪಿ. ಕಾಯಿಲೆ ಉಳ್ಳವರು ಕೂಡ ಕಣ್ಣಿಗೆ ಔಷಧಿ ಪಡೆಯಬಹುದು ಅದರಿಂದ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಇಂಗ್ಲಿಷ್ ಮೆಡಿಸಿನ್ ತೆಗೆದು ಕೊಂಡವರು ಸಹ ಈ ನಾಟಿ ಔಷಧಿ ಕಣ್ಣಿಗೆ ಹಾಕಿಸಿ ಕೊಳ್ಳಬಹುದು, ಮೊಣಕಾಲು, ಮೈ ಕೈ ನೋವು, ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರು ನಿವಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಏನಿದ್ದರೂ ಸೇವೆ ಮಾತ್ರ ನಮ್ಮದು ಫಲಾಪೇಕ್ಷೆ ದೇವರಿಗೆ ಬಿಟ್ಟಿದ್ದು ಎಂದರು ಒಬ್ಬ 12 ವರ್ಷದ ಬಾಲಕಿ ಕಣ್ಣಿನಲ್ಲಿ ಹೂ ಕುಂತು ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ ಒಂದು ಗುರುವಾರ ಮಾತ್ರ ಕೊಟ್ಟೂರು ಪಟ್ಟಣದಲ್ಲೆ ನಾಟಿ ಔಷಧಿ ತೆಗೆದು ಕೊಂಡಿದ್ದಾರೆ ಈಗ ಆ ಬಾಲಕಿಗೆ ಕಣ್ಣುಗುಡ್ಡಿ ಮೇಲಿರುವ ಬಿಳಿಪೊರೆ (ಹೂ) ಕರಿ ಗುಡ್ಡಿಯಿಂದ ಬೇರ್ಪಟ್ಟ ಲಕ್ಷಣಗಳು ಕಂಡು ಬಂದಿದೆ ಎಂದು ಬಾಲಕಿ ತಂದೆ ನನಗೆ ಫೋನ್ ಮಾಡಿ ಹೇಳಿದ್ದಾರೆ ಎಂದ ನಾಟಿವೈದ್ಯ. ಜನರ ಆಸಕ್ತಿ ಹೆಚ್ಚಾಗಿರುವ ಕಾರಣ ಪ್ರತಿ ಗುರುವಾರ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆ 108 ಶಿವಲಿಂಗ ದೇವಸ್ಥಾನ ಹತ್ತಿರ ಇರುವ ಅಂಜಿನೇಯ ದೇವಸ್ಥಾನ ಬಳಿ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆವರೆಗೆ ಕಣ್ಣಿಗೆ ನಾಟಿ ಔಷಧಿ ಬಿಡಲಾಗುವುದು ಇಂದು ಸುಮಾರು 70 ಕ್ಕೂ ಹೆಚ್ಚಿನ ಜನರು ಇದರ ಸದುಪಯೋಗ ಪಡೆದು ಕೊಂಡಿದ್ದಾರೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್. ಕುಮಾರ್. ಸಿ. ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button