ಡಿ.ಎಸ್.ಎಸ್ ಬೆಳಗಾವಿ ವಿಭಾಗೀಯ ಸಂಚಾಲಕರಾಗಿ ಹನಮಂತ ಎಚ್.ಹೀರೆಮನಿ ಆಯ್ಕೆ.
ಹುನಗುಂದ ಮೇ.30
![](https://i0.wp.com/sknewskannada.in/wp-content/uploads/2024/05/IMG-20240530-WA0047.jpg?resize=708%2C890&ssl=1)
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊll ಬಿ. ಕೃಷ್ಣಪ್ಪ ಸ್ಥಾಪಿತ ರಿ.ನಂ-386/2020-21 ಬಾಗಲಕೋಟೆ ಜಿಲ್ಲಾ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಹನಮಂತ ಎಚ್.ಹೀರೆಮನಿ ಇವರ ಕ್ರಿಯಾಶೀಲತೆ, ಕಾರ್ಯ ಚಟುವಟಿಕೆಯನ್ನು ಗುರುತಿಸಿ ಇವರನ್ನು ಬೆಳಗಾವಿ ವಿಭಾಗೀಯ ಸಂಚಾಲಕರನ್ನಾಗಿ ಆಯ್ಕೆ ಮಾಡಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರು ಮಾರುತಿ ಬಿ. ಹೊಸಮನಿ ತಿಳಿಸಿದ್ದಾರೆ.
ಬೆಳಗಾವಿ ವಿಭಾಗೀಯ ಮಟ್ಟದಲ್ಲಿ ಬರುವ ಎಲ್ಲಾ ಜಿಲ್ಲೆಗಳಿಗೆ ಶೀಘ್ರವಾಗಿ ಸಂಚಾರ ಕೈಗೊಂಡು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲು ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿ ಆಯ್ಕೆ ಮಾಡಿ ಆದೇಶಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ.