ಶಿಕ್ಷಣ, ಉದ್ಯೋಗಕ್ಕಾಗಿ ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಕಾಂಗ್ರೇಸ್ ಅಭ್ಯರ್ಥಿ ಡಾ. ಚಂದ್ರಶೇಖರ ಜಿ. ಪಾಟೀಲ ಅವರ ಗೆಲುವುಗಾಗಿ ಶ್ರಮಿಸಬೇಕೆಂದ – ಶಾಸಕ ಡಾ. ಶ್ರೀ ನಿವಾಸ್.ಎನ್.ಟಿ.
ಕೂಡ್ಲಿಗಿ ಮೇ.30

ವಿಧಾನ ಸಭಾ ಕ್ಷೇತ್ರದ ಶಾಸಕರ ಕಛೇರಿ ಮುಂಭಾಗದಲ್ಲಿ ಆಯೋಜಿಸಿದ್ದ “ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆ – 2024” ಅಂಗವಾಗಿ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರ ಅಧ್ಯಕ್ಷತೆಯಲ್ಲಿ ವಿವಿಧ ಪದಾಧಿಕಾರಿಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿದರು. ನಮ್ಮ ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು “ಶಿಕ್ಷಣ ಮತ್ತು ಉದ್ಯೋಗ” ಕ್ಕಾಗಿ ಕಾಂಗ್ರೆಸ್ ಪಕ್ಷದ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಡಾ. ಚಂದ್ರಶೇಖರ ಬಿ. ಪಾಟೀಲ ಅವರ ಗೆಲುವುಗಾಗಿ ಶ್ರಮಿಸಬೇಕು. ಸಾಮಾಜಿಕ ಸುಧಾರಣೆ ತರುವ ನಿಟ್ಟಿನಲ್ಲಿ ಸಹಕಾರ ಕೊಡಬೇಕು ಎಂದರು. ಮುಖಂಡರ ಹಿರಿತನ, ಅನುಭವ ಮತ್ತು ಯುವಕರ ಚೈತನ್ಯ ನಮ್ಮ ಕಾಂಗ್ರೇಸ್ ಪಕ್ಷಕ್ಕೆ ತಳ ಮಟ್ಟದಲ್ಲಿ ಒಂದು ಶಕ್ತಿ ಎಂದೂ ಶಾಸಕರು ಹೇಳಿದರು.

ನಮ್ಮ ಕ್ಷೇತ್ರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕೊರತೆಗಳಿವೆ. ವಸತಿ ಶಾಲೆಗಳು ಹಾಗೂ ಪದವೀಧರರ ನಿರುದ್ಯೋಗದ ಸಮಸ್ಯೆಗಳನ್ನು ಬಗೆ ಹರಿಸಲು ಹಿರಿಯ ಮುತ್ಸದ್ದಿ ರಾಜಕಾರಣಿಯಾದ ಡಾ. ಚಂದ್ರಶೇಖರ ಬಿ ಪಾಟೀಲ ಅವರ ಗೆಲುವುಗಾಗಿ ಕೈ ಜೋಡಿಸಬೇಕು ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ , ಕೆಪಿಸಿಸಿ ಕಾಂಗ್ರೆಸ್ ಸದಸ್ಯರಾದ ಉಮೇಶ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀ ಎಸ್ ವೆಂಕಟೇಶ , ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಕಲ್ಲಹಳ್ಳಿ ಸಿದ್ದಣ್ಣ, ಶೇಖರಪ್ಪ ಹಾರಕಭಾವಿ, ಕುರಿಹಟ್ಟಿ ಬೋಸಯ್ಯ, ಹೂಡೇಂ ಜಿ. ಪಾಪನಾಯಕ, ಮುಖಂಡರಾದ ಮಲ್ಲಿಕಾರ್ಜುನ, ಬುಡ್ಡಾ ರೆಡ್ಡಿ, ತಮ್ಮಣ್ಣ ಎನ್.ವಿ, ಶಿವಪುರ ರಾಜಣ್ಣ, ಪೂಜಾರಹಳ್ಳಿ ಗ್ರಾ. ಪಂ ಅಧ್ಯಕ್ಷರಾದ ವೆಂಕಟೇಶ, ದಿನ್ನೇ ಮಲ್ಲಿಕಾರ್ಜುನ, ಹಾಲಸಾಗರ ಮಾರೇಶ, ಕಾಂಗ್ರೆಸ್ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.