ಕೂಡ್ಲಿಗಿ ತಾಲೂಕಿನ ಪ್ರತಿಭಾವಂತ ಗಾಣಿಗ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.
ಕೂಡ್ಲಿಗಿ ಜೂನ್.01

ಅಖಿಲ ಭಾರತ ಗಾಣಿಗರ ಸಂಘ ಕೂಡ್ಲಿಗಿ ತಾಲೂಕಾ ಘಟಕದ ವತಿಯಿಂದ ಶ್ರೀ ಶ್ರೀ ಶ್ರೀ ಶ್ರೀ. ಲಿಂಗೈಕ್ಯ ಪರಮ ಪೂಜ್ಯ ಜಯದೇವ ಜಗದ್ಗುರುಗಳವರ ಪುಣ್ಯ ಸ್ಮರಣೆ ಹಾಗೂ ಕೂಡ್ಲಿಗಿ ತಾಲೂಕಾ ಗಾಣಿಗ ಸಮುದಾಯದ 2023/24 ನೇ. ಸಾಲಿನಲ್ಲಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳ ಶೇಕಡ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5- 6- 2024 ರಂದು ಬುಧವಾರ ಕೊನೆಯ ದಿನಾಂಕವಾಗಿದ್ದು, ಅರ್ಜಿ ಜೊತೆಗೆ ವಿದ್ಯಾರ್ಥಿಗಳು ಅಂಕಪಟ್ಟಿ, ತಂದೆ ತಾಯಿಯ ಆಧಾರ ಕಾರ್ಡು. 2 ಭಾವಚಿತ್ರ. ಜಾತಿ ಪ್ರಮಾಣ ಪತ್ರ ಅಥವಾ ಶಾಲಾ ದೃಢೀಕರಣ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ, ಅರ್ಜಿಯನ್ನು ಸಂಘದ ಸಹ ಕಾರ್ಯದರ್ಶಿಗಳಾದ ಎಸ್ ಕೊಟ್ರಣ್ಣ ಮೊಬೈಲ್ :- 6360619419 ಮತ್ತು ಸಂಘದ ಸದಸ್ಯರಾದ ಕೆ ಸುಭಾಷ್ ಚಂದ್ರ ಮೊ :- 9900782383 ಇವರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗಾಣಿಗ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸದುಪಯೋಗವನ್ನು ಪಡಿದು ಕೊಳ್ಳಲು ಅಖಿಲ ಭಾರತ ಗಾಣಿಗರ ಸಂಘ ಕೂಡ್ಲಿಗಿ ತಾಲೂಕಾ ಘಟಕದ ವತಿಯಿಂದ ಪತ್ರಿಕಾ ಪ್ರಕಟಣೆಗೆ ತಿಳಿಸಲಾಗಿದೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.