ನೆಟೆರೋಗ ನಿರೋಧಕ ಹಾಗೂ ಅಧಿಕ ಇಳುವರಿ ತಳಿಗಳನ್ನು ಬಳಸಿ – ಸೋಮನಗೌಡ ಬಿರಾದಾರ.
ದೇವರ ಹಿಪ್ಪರಗಿ.03

03-06-2023 ರಂದು ಕೃಷಿ ಇಲಾಖೆ ವತಿಯಿಂದ ರೈತ ಸಂಪರ್ಕ ಕೇಂದ್ರ ದೇವರ ಹಿಪ್ಪರಗಿ ಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು. ಕೃಷಿ ಅಧಿಕಾರಿ ಹೆಚ್ ಕೆ ಪಾಟೀಲ ಮಾತನಾಡಿ ಸರ್ಕಾರದ ಆದೇಶದಂತೆ ಈ ಬಾರಿ ಬೀಜ ವಿತರಣೆಯನ್ನು ಕ್ಯೂ ಆರ್ ಕೋಡ್ ಮೂಲಕ ವಿತರಿಸಲಾಗುತ್ತಿದ್ದು . ರೈತರು ಗರಿಷ್ಠ 5 ಎಕರೆವರೆಗೆ ಸಹಾಯದನದಲ್ಲಿ ಬಿತ್ತನೆ ಬೀಜಗಳನ್ನು ಪಡೆದು ಕೊಳ್ಳಬಹುದು ಎಂದರು. ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ 82 ಕ್ವಿಂಟಾಲ್ ತೊಗರಿ, 3 ಕ್ವಿoಟಾಲ್ ಹೆಸರು, 20 ಕ್ವಿoಟಾಲ್ ಮೆಕ್ಕೆಜೋಳ, 3 ಕ್ವಿoಟಾಲ್ ಸಜ್ಜೆ, 2 ಕ್ವಿoಟಾಲ್ ಸೂರ್ಯಕಾಂತಿಯನ್ನು ದಾಸ್ತಾನು ಕರಿಸಲಾಗಿದೆ. ಮುಖ್ಯವಾಗಿ ತೊಗರಿಯಲ್ಲಿ ನೀರಾವರಿ ಹಾಗೂ ಹೆಚ್ಚು ತೇವಾಂಶ ಹಿಡಿದಿಟ್ಟು ಕೊಳ್ಳುವ ಜಮೀನುಗಳಿಗೆ ಹೊಸದಾಗಿ ಅಭಿವೃದ್ಧಿ ಪಡಿಸಿದ ನೆಟೆರೋಗ ನಿರೋಧಕ ತಳಿಗಳಾದ ಜಿ ಆರ್ ಜಿ -152, ಜಿ ಆರ್ ಜಿ 811 ಗಳನ್ನು ರೈತರು ಬಳಸಬೇಕು ಮತ್ತು ಬಿತ್ತನೆ ಬೀಜಗಳನ್ನು ಪಡೆಯಲು ಕಡ್ಡಾಯವಾಗಿ ಎಫ್.ಐ.ಡಿ, ಮತ್ತು ಜಾತಿ ಪ್ರಮಾಣ ಪತ್ರ ದಾಖಲಾತಿಗಳನ್ನು ಸಲ್ಲಿಸಿ ಸಹಾಯದನದಲ್ಲಿ ಪ್ರಮಾಣಿಕೃತ ಬಿತ್ತನೆ ಬೀಜಗಳನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.