ಡಾ. ಪ್ರಭು ಗಂಜಿಹಾಳ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ.
ಹೊಳೆ ಆಲೂರು ಜೂನ್.08
ರೋಣ ತಾಲೂಕಿನ ಹೊಳೆ ಆಲೂರಿನ ಶ್ರೀ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ, ಪದವಿ ಮಹಾ ವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಕೇಂದ್ರದ ನೂತನ ಪ್ರಾಚಾರ್ಯರಾಗಿ ಡಾ.ಪ್ರಭು ಗಂಜಿಹಾಳ ಅಧಿಕಾರ ವಹಿಸಿ ಕೊಂಡರು. ಕಳೆದ ಮೂವತ್ಮೂರು ವರ್ಷಗಳಿಂದ ಕನ್ನಡ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರ ಹುದ್ದೆ ಅಲಂಕರಿಸಿರುವ ಡಾ.ಪ್ರಭು ಗಂಜಿಹಾಳ ಅವರಿಗೆ ಮಹಾ ವಿದ್ಯಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಸಿ.ಪಾಟೀಲ, ಗೌರವ ಕಾರ್ಯದರ್ಶಿ ಎಂ.ಎನ್.ತೇಜಿಗೌಡ್ರ ಮತ್ತು ಆಡಳಿತ ಮಂಡಳಿ ಸದಸ್ಯರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಡಾ.ಎಸ್.ಬಿ.ಸಜ್ಜನರ್, ಪ್ರೊ.ಎನ್.ಆರ್. ಹಿರೇಸಕ್ಕರಗೌಡ್ರ, ಪ್ರೊ.ಎಸ್.ವಾಯ್.ಪೂಜಾರ, ಡಾ.ಕುಮಾರ ಹಂಜಗಿ, ಪ್ರಾಧ್ಯಾಪಕರಾದ ವಿ.ಪಿ.ಪಾಟೀಲ, ಎಂ.ಎಸ್.ಬೇವೂರ, ಶ್ರೀಮತಿ ರೇಶ್ಮಾ ಟಕ್ಕೇದ, ಶ್ರೀಮತಿ ಜಿ.ಎಂ.ಪೊಲೀಸ್ಪಾಟೀಲ, ಎಸ್.ಬಿ.ಹಳ್ಳೂರ, ವಿ.ಬಿ.ಜಾಲಿಹಾಳ, ವಿ.ಎಸ್.ಕಪ್ಪಲಿ, ಆನಂದ ಕೆಂಚನಗೌಡರ , ಕೆ.ಎ.ಕೊಪ್ಪದ, ಶಿಲ್ಪ ಮೆದನಾಪೂರ, ಶ್ರೀ ಎಸ್.ಜಿ.ಮಾಳವಾಡ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.