ಅಂಬಲಿ ಗ್ರಾಮದಲ್ಲಿ ಸಮಸ್ಯೆಗಳ ಸುರಿಮಳೆ – ನಾಯಿಯ ಹಾವಳಿ.

ಅಂಬಳಿ ಜೂನ್.15

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮದಲ್ಲಿ ಸಮಸ್ಯೆಗಳ ಸುರಿಮಳೆ ಜೊತೆಗೆ ನಾಯಿಯ ಹಾವಳಿ. ಹೌದು ಅಂಬಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿ ಮತ್ತು ಗ್ರಾಮದ ಸುತ್ತ ಮುತ್ತಲಿನ ದಾರಿ ತುಂಬಾ ಹದಗೆಟ್ಟು ಹೋಗಿವೆಯಂತೆ ಮತ್ತು ಇಲ್ಲಿ ಬೋರ್ವೆಲ್ ಗಳ ನೀರಿನಲ್ಲಿ ಫ್ಲೋರೈಡ್ ಇದೆಯಂತೆ ನೀರಿನ ತೊಟ್ಟಿ ಪಾಚಿಗಟ್ಟಿ ಹೋಗಿದೆ ಹೀಗಾದರೆ ಇಲ್ಲಿನ ಸಾರ್ವಜನಿಕರ ಆರೋಗ್ಯದ ಗತಿಯೇನು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಕೊರತೆ ಇದೆಯಂತೆ ಮಕ್ಕಳು ಶೌಚಾಲಯಕ್ಕಾಗಿ ಹೊರಗಡೆನೇ ಹೋಗಬೇಕು ಈ ಎಲ್ಲಾ ಸಮಸ್ಯೆಗಳ ಸುಳಿಯಲ್ಲಿ ನಾಯಿಯ ಹಾವಳಿ ಸುಮಾರು ಜನಗಳಿಗೆ ಅದು ಕಚ್ಚಿದೆಯಂತೆ ವಿಜಯ್ ಎಂಬ ಬುದ್ಧಿಮಾಂದ್ಯ ಯುವಕನಿಗೆ ತೊಡೆ ಭಾಗದಲ್ಲಿ ಕಚ್ಚಿದ್ದು.

ಮತ್ತು ಈ ನಾಯಿ ಏಕಾಏಕಿ ಬಂದು ಜನರ ಮೇಲೆ ಹೆಗರಿ ಕಡಿಯುತ್ತಂತೆ ಈ ನಾಯಿ ಬರುವುದನ್ನು ನೋಡಿ ತಪ್ಪಿಸಿ ಕೊಳ್ಳಲು ಹೋದ ಮಹಿಳೆಗೆ ಆಯತಪ್ಪಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಪರೇಷನ್ ಮಾಡಿರುವರಂತೆ ರೂ. 1,40,000 ಖರ್ಚು ಬಂದಿದೆ ಒಟ್ಟಿನಲ್ಲಿ ಈ ನಾಯಿ ಸುಮಾರು ದಿನಗಳಿಂದ ಇದ್ದು ಅನೇಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತನೆ ಬಂದಿದೆ ಗ್ರಾಮ ಪಂಚಾಯಿತಿಗೆ ತಿಳಿಸಿದರೆ ಇಂದು ನಾಳೆ ಎನ್ನುತ್ತಾರೆ ಹೀಗಾಗಿ ಅನುಭವಿಸುತ್ತಿರುವ ಜನರ ಕಷ್ಟ ತಪ್ಪಿಸುವವರು ಯಾರು ಜನನಾಯಕರು ಗಮನಿಸುತ್ತಾರೋ ಅಧಿಕಾರಿಗಳು ಗಮನಿಸುತ್ತಾರೋ ಎಂಬುದು ತಿಳಿಯದಾಗಿದೆ ಎಂದು ಇಲ್ಲಿನ ರಶೀದ್ ಮೋಹನ್ ಸ್ವಾಮಿ ವಿಜಯ್ ಮತ್ತಿತರ ಸಾರ್ವಜನಿಕರು ನಮ್ಮ ಸುದ್ದಿಯೊಂದಿಗೆ ತಮ್ಮ ಅಳಲನ್ನು ತೋಡಿ ಕೊಂಡರು.

ಇಲ್ಲಿನ ಫ್ಲೋರೈಡ್ ನೀರಿನ ಸಮಸ್ಯೆ ಶಾಲಾ ಮಕ್ಕಳ ಶೌಚಾಲಯಕ್ಕೆ ಇಲ್ಲಿನ ದಾರಿ ಮತ್ತು ಈ ನಾಯಿಯನ್ನು ಹಿಡಿದು ಸಾರ್ವಜನಿಕರ ಹಿತವನ್ನು ಕಾಪಾಡಲು ಇಲ್ಲಿನ ಜನನಾಯಕರು ಹಾಗೂ ಅಧಿಕಾರಿಗಳು ಮುಂದಾಗ ಬೇಕಾಗಿದೆ ಎಂದು ಶಾಸಕ ಕೆ ನೇಮಿರಾಜ್ ನಾಯಕ್ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವರನ್ನು ಇಲ್ಲಿನ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಬೇಡಿಕೆಯಾಗಿದೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button