ನೀಟ್ (NEET) ಮತ್ತು ಯು.ಜಿ.ಸಿ ನೆಟ್ (UGC-NET) ಪರೀಕ್ಷೆಯಲ್ಲಿ ಆದ ಅಕ್ರಮವನ್ನು ತನಿಖೆಗೆ ಒಳಪಡಿಸಿ.

ಇಲಕಲ್ಲ ಜೂನ್.21

ಇಲಕಲ್ಲ ತಾಲೂಕಿನ ಇಲಕಲ್ಲ ಪಟ್ಟಣದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತು ಎನ್.ಟಿ.ಎ(NTA) ನಡೆಸುವ ಕೇಂದ್ರಿಕೃತ ನೀಟ್ ಪರೀಕ್ಷೆಯನ್ನು ರದ್ದುಪಡಿಸಿ, ನೀಟ್ ಪರೀಕ್ಷೆ ನಡೆಸಲು ಆಯಾ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ನಗರದ ಕಂಠಿ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ, ಸರ್ಕಾರಕ್ಕೆ ಆಗ್ರಹ ಪತ್ರವನ್ನು ತಹಸಿಲ್ದಾರ್ ಇಳಕಲ್ಲ ಇವರ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರದ ವಿವಿಧ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ವಸಂತಕುಮಾರ ಕಡ್ಲಿಮಟ್ಟಿ ಮತ್ತು ಸ್ಟೂಡೆಂಟ ಇಸ್ಲಾಮೀಕ್ ಆರ್ಗನೈಜೇಶನ್ (SIO) ರಾಜ್ಯ ಕಾರ್ಯದರ್ಶಿ ಮುಹ್ಮದ ಫೀರ್ ಲಟಗೇರಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್.ಐ.ಓ(SIO) ಸ್ಥಾನೀಯ ಅಧ್ಯಕ್ಷ ಮುಹ್ಮದ ಆಸೀಫ ಹುಣಚಗಿ, ಹಬಿಬುಲ್ಲಾಹ ತಾವರಗೇರಿ, ಮುಹ್ಮದ ಅತೀಕ್ ಬಿಳೇಕುದರಿ, ಅಬ್ದುಲ್ ಗಫಾರ ತಹಶೀಲ್ದಾರ, ಸಂಘಟನೆಯ ಮುಖಂಡರು, ಮತ್ತಿತರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button