“ನಾವು ನಮ್ಮವರು”.

ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆ

ಪಯಣದ ಅಂತ್ಯವೂ ಇನ್ನೂ ಕಾಣದಾಗಿದೆ

ಕಷ್ಟ ಸುಖಗಳ ಮನವು ಅನುಭವಿಸಿದೆ

ಕಾರಣ ಸಿಗದೆ ಪಯಣ ಮತ್ತೆ ನಿಂತಿದೆ

ಬದುಕಿನ ಪಯಣದಲ್ಲಿ ಸಿಕ್ಕರು ಹಲವರು

ನೋವು ನಲಿವನು ಕೆಲವರು ಹಂಚಿಕೊಂಡರು

ನಂಬಿದವರು ಮನಕೆ ಖುಷಿಯ ಕೊಟ್ಟರು

ಮಿಕ್ಕವರು ಬೆನ್ನಿಗೆ ಚೂರಿ ಹಾಕಿದರು

ಪ್ರೀತಿ ಪ್ರೇಮದ ಅರ್ಥವೇ ಗೊತ್ತಿಲ್ಲದವರು

ಬದುಕನ್ನೇ ಹಾಳು ಮಾಡಿ ಬೆಂಕಿ ಇಟ್ಟವರು

ಇವುಗಳ ಮಧ್ಯೆ ಬದುಕನ್ನೇ ಮೆಟ್ಟಿ ನಿಂತರು

ಅವರೇ ಸಮಾಜಕ್ಕಾಗಿ ಬದುಕಿದ ಸಾಧಕರು

ಬದುಕು ಒಂದು ನಿಲ್ಲದ ಜಂಜಾಟವು

ಬದುಕಿನಲ್ಲಿ ಬೇಕು ಪ್ರೀತಿ ಸೌಜನ್ಯವು

ನಿಲ್ಲಲಿ ನಾನು ನನ್ನದೆಂಬ ಅಹಂಕಾರವು

ಬೆಳೆಸಿಕೊಳ್ಳಿ ನಾವು ನಮ್ಮವರೆಂಬ ಭಾವನೆಯ

ಪ್ರತಿಯೊಬ್ಬರ ಮೇಲೆ ನಂಬಿಕೆ ಇಡಬೇಡಿರಿ

ಹಾಗಂತ ಎಲ್ಲರೂ ಕೆಟ್ಟವರಲ್ಲ ಅರಿಯಿರಿ

ಒಳ್ಳೆಯವರಿಗೂ ಕೆಟ್ಟವರಿಗೂ ಒಳ್ಳೆಯವರಾಗಿ

ಬದುಕಿರಿ

ಮನುಷ್ಯನನ್ನು ಮನುಷ್ಯನಂತೆ ಅನುದಿನ

ನಂಬಿರಿ

ಶ್ರೀ ಮುತ್ತು ಯ ವಡ್ಡರ ಶಿಕ್ಷಕರು

ಬಾಗಲಕೋಟ 9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button