ನೀಡ್ ಬೇಸ್ ಇಂಡಿಯಾ ಟ್ರಸ್ಟ್ ಮುಖ್ಯಸ್ಥರಾದ ಪ್ರತಾಪ್ ಅವರಿಂದ 6, ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.

ಕಾಟಾಪೂರ ಜುಂ.02

ಸರಕಾರಿ ಪ್ರೌಢ ಶಾಲೆ ಕಾಟಾಪೂರದಲ್ಲಿ ನೀಡ್ ಬೇಸ್ ಇಂಡಿಯಾ ಟ್ರಸ್ಟ್ ಮುಖ್ಯಸ್ಥರಾದ ಶ್ರೀ ಪ್ರತಾಪ್ ಸರ್ ರವರು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತಿಯೊಬ್ಬರಿಗೆ 6 ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶ್ರೀ ಶಂಕ್ರಪ್ಪ ಹಳ್ಳೂರ. ಶ್ರೀ ಈರಪ್ಪ ಹಾದಿಮನಿ. ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸಿದ್ಧಣ್ಣ ಆವಿನ. ಶ್ರೀ ಮಹಾಂತೇಶ ಜಗ್ಗಲ. ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಬಸವರಾಜ ಆವಿನ. ಶ್ರೀ ಹನಮಂತಪ್ಪ ತೂಗದೆಲಿ. ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಮಲ್ಲಪ್ಪ ಹೆಬ್ಬಾಳ ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯರುವಾರಿಗಳಾದ ಹಾಗೂ ಈ ಕೊಡುಗೆಗೆ ಕಾರಣಿಕರ್ತರಾದಶ್ರೀ ವಿಜಯಕುಮಾರ ಮೈತ್ರಿ ಸರ್ ರವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಈರಣ್ಣ ಕೊಟ್ರಣ್ಣವರ ಮಾಡಿದರು. ಈ ಸಮಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಸವಲಿಂಗಯ್ಯ ಹಿರೇಮಠ. ಹಾಗೂ ಶಿಕ್ಷಕರಾದ ಶ್ರೀ ಮಲ್ಲಪ್ಪ ಚಕ್ಕಡಿ ಶ್ರೀ ವಿಕ್ರಾಂತ ಗಜೇಂದ್ರಗಡ. ಶ್ರೀ ಶಿವಪ್ಪ ರಾಮದುರ್ಗ. ಶ್ರೀ ಪರಪ್ಪ ಅತನಿ. ಶ್ರೀ ಅಯ್ಯಪ್ಪ ರವರು ಕಾರ್ಯಕ್ರಮದಲ್ಲಿ ಹಾಗೂ ಶಾಲಾ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button