1600, ಉಚಿತ ನೋಟ್ ಬುಕ್ ಗಳನ್ನು ದೇಣಿಗೆ ನೀಡಿದ – ಪ್ರತಾಪ್.

ಹೂಲಗೇರಿ ಜು.02

ನೀಡ್ ಬೇಸ್ ಇಂಡಿಯಾ ಬೆಂಗಳೂರು ಹಾಗೂ ಸುಂದರ ಭಾರತ ಟ್ರಸ್ಟ್ ಬೆಂಗಳೂರು ಇವರು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 1600 ಉಚಿತ ನೋಟ್ ಬುಕ್ ದೇಣಿಗೆ ನೀಡಿದರು. ಇಂದು ಓಂ ನೋಟ್ ಬುಕ್ ಗಳನ್ನು ನಮ್ಮ ಶಾಲೆಯ SDMC ಅಧ್ಯಕ್ಷರು, ಸದಸ್ಯರು, ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರ ಸಮುದಾಯದಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ತಲಾ ನಾಲ್ಕು ನೋಟ್ ಬುಕ್ ವಿತರಣೆ ಮಾಡಲಾಯಿತು. ಸುಂದರ ಭಾರತ ಟ್ರಸ್ಟ್ ಬೆಂಗಳೂರಿನ ಶ್ರೀ ಪ್ರತಾಪ್ ಸರ್ ಅವರಿಗೆ ನಮ್ಮ ಶಾಲೆಯ SDMC ಅಧ್ಯಕ್ಷರಾದ ಶ್ರೀ ಅಮರಯ್ಯ ವಿರಕ್ತಮಠ, ಪ್ರಭಾರಿ ಮುಖ್ಯ ಗುರುಗಳಾದ ಶ್ರೀಮತಿ ಅಕ್ಕಮಹಾದೇವಿ ಗೌಡಪ್ಪನವರ, ಶಿಕ್ಷಕರಾದ ವಿರುಪಾಕ್ಷಗೌಡ, ಇತತರು ಹಾಜರಾಗಿದ್ದರು.ತಮ್ಮ ಈ ಕಾರ್ಯಕ್ಕೆ ಅಮೂರ್ತ ಸ್ವರೂಪಿ ಭಗವಂತನ ಆಶೀರ್ವಾದ ತಮ್ಮ ಹಾಗೂ ತಮ್ಮ ಸಂಸ್ಥೆಯ ಮೇಲಿರಲಿ. ತಮ್ಮ ಸಂಸ್ಥೆಯ ಇನ್ನೂ ಬಾನೆತ್ತರಕ್ಕೆ ಬೆಳೆಯಲಿ. ತಮ್ಮಿಂದ ಇನ್ನೂ ಅನೇಕ ಸರಕಾರಿ ಶಾಲೆಗಳ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ.ನನಗೆ ವಿಶೇಷವಾಗಿ ಕೊಪ್ಪಳ ಜಿಲ್ಲೆಯ ೧೨ ಶಾಲೆಗಳಿಗೆ ನೋಟ್ ಬುಕ್ ವಿತರಣೆ ಮಾಡುವ ಉಸ್ತುವಾರಿ ನೀಡಿದ ಪ್ರತಾಪ್ ಸರ್ ಅವರಿಗೆ ಅನಂತ ಧನ್ಯವಾದಗಳು. ಹಾಗೂ ಭಾಸ್ಕರ ಸಕ್ರಿ. ಜಿ.ಪಿ.ಟಿ ಶಿಕ್ಷಕರು ಸ.ಮಾ.ಹಿ.ಪ್ರಾ ಶಾಲೆ ಹೂಲಗೇರಿ. ಸಹಕರಿಸಿದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಹಾಗೂ ಮುಖ್ಯ ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button