ವೈದ್ಯರಾದ ಡಾ, ಸಂತೋಷ ಪೂಜಾರ ರವರನ್ನು ಸನ್ಮಾನಿಸುತ್ತಿರುವದು.

ಇಲಕಲ್ಲ ಜು.02

ವೈದ್ಯರು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಅವರಿಂದ ಇಂದು ನಾವು ಸುಖ ಸಂತೋಷ ಆರೋಗ್ಯ ದಿಂದ ಜೀವನ ನೆಡೆಸುತ್ತಿದ್ದೇವೆ ವೈದ್ಯರು ಇರದಿದ್ದರೆ ಈ ಭೂಮಿಯ ಮೇಲೆ ಮಾನವರಾದ ನಾವುಗಳು ಜೀವಿಸಲು ಸಾಧ್ಯವಾಗುತ್ತಿರಲಿಲ್ಲ ನಮ್ಮ ದೇಹ ಆರೋಗ್ಯದಿಂದ ಇರಲು ವೈದ್ಯರ ಶ್ರೀ ರಕ್ಷೆ ಬೇಕು ಎಂದು ಗ್ರಾಮದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪತ್ರಕರ್ತರಾದ ವೀರೇಶ್ ಶಿಂಪಿ ಯವರು ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪತ್ರಕರ್ತರ ಬಳಗದಿಂದ ಆಯೋಜಿಸಿದ್ದ ವೈದ್ಯರ ಸತ್ಕಾರ ಸಮಾರಂಭ ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ವೈದ್ಯರಾದ ಡಾ ಸಂತೋಷ ಪೂಜಾರರವರನ್ನು ಗೌರವಿಸಿ ಸತ್ಕರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಯುವ ಮುಖಂಡ ರಾಜೇಸಾಬ ಪರಾಸರ ವಹಿಸಿದ್ದರು. ಇಲಕಲ್ಲ ನಗರದ ಶ್ರೀ ಮತಿ ಸಾವಿತ್ರಿ ಪೂಜಾರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಯಂಕಣ್ಣ ಮಳ್ಳಿ, ಅಯ್ಯನಗೌಡ ಪಾಟೀಲ, ರಾಜು ಶಿವನಗುತ್ತಿ, ಸುನಿಲ ಸಾಹುಕಾರ್, ಸೋಮಶೇಖರ್ ಹರಣಶಿಕಾರಿ, ಅಲ್ಮಾಸ ಬಾಗವಾನ, ಅಸ್ಮಾ ಮಸ್ಕಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್.ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button