ಗ್ರಾಮ ಪಂಚಾಯತಿ ಅಧ್ಯಕ್ಷರ ಅಧಿಕಾರ ಮೊಟಕು.
ಯಲಗೋಡ ಜು.02
![](https://i0.wp.com/sknewskannada.in/wp-content/uploads/2024/07/IMG-20240702-WA01241.jpg?resize=708%2C649&ssl=1)
ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸಲು ನಿರ್ಧರಿಸಲಾಗಿದೆ, ಅಧ್ಯಕ್ಷರಿಗೆ ಹಣಕಾಸಿನ ನಿರ್ವಹಣೆ ಹೊಣೆಗಾರಿಕೆಯಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ ವ್ಯವಹಾರ ಎಲ್ಲಾ ಚೆಕ್ ಗಳಿಗೂ ಸಹಿ ಮಾಡಲು ಅಧಿಕಾರವನ್ನು ಅಭಿವೃದ್ಧಿ ಅಧಿಕಾರಿಗೆ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಲಾಗಿದೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತಿ ರಾಜ್ಯ ಕಾಯ್ದೆಯ ಗ್ರಾಮ ಪಂಚಾಯತಿ ಆಯವ್ಯಯ ಮತ್ತು ಲೆಕ್ಕಪತ್ರಗಳು ನಿಯಮಕ್ಕೆ ೨೦೦೬ ರಲ್ಲಿ ತಂದಿದ್ದು ತಿದ್ದು ಪಡಿಯಂತೆ ಗ್ರಾಮ ಪಂಚಾಯತಿ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸಿವ ಅಧಿಕಾರಗಳು ಅಥವಾ ಪ್ರಾಧಿಕಾರ ನಿರ್ವಹಿಸಲು ಇಂತಹ ಅಧಿಕಾರವನ್ನು ಇಲ್ಲಿಯವರಿಗೂ ಸ್ಥಳೀಯ ಆಡಳಿತದ ಚುನಾಯಿತ ಮುಖ್ಯಸ್ಥರು ಅಧ್ಯಕ್ಷರಾಗಿ ನೀಡಲಾಗಿತ್ತು, ವಸತಿ ಯೋಜನೆ ಉದ್ಯೋಗ ಖಾತ್ರಿ ಅನುಷ್ಠಾನ ಹಣಕಾಸು ನಿಧಿ ಹಾಗೂ ತೆರಿಗೆ ಖರ್ಚು ವೆಚ್ಚಗಳ ಹಾಗೂ ಚೆಕ್ ಗಳಿಗೂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಜಂಟಿ ಸಹಿ ಕಡ್ಡಾಯವಾಗಿತ್ತು. ಈಗ ಸರ್ಕಾರ ೨೦೦೬ ರಲ್ಲಿ ದತ್ತವಾದ ಅಧಿಕಾರವನ್ನು ಚುನಾಯಿತ ಅಧ್ಯಕ್ಷರ ಸಹಿ ಅಧಿಕಾರ ಹಿಂಪಡೆಯಲು ಹೊಸದಾಗಿ ನಡಾವಳಿ ರೊಪಿಸಿದೆ, ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸುವುದು ಏಕೆ?. ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನೀಡಲಾಗಿದ್ದ ಸಹಿ ಅಧಿಕಾರವನ್ನು ಹಿಂಪಡೆಯಲು ಸರ್ಕಾರದ ಪ್ರಮುಖವಾಗಿದ ಎರಡು ಕಾರಣಗಳನ್ನು ಪಟ್ಟಿ ಮಾಡಿದೆ ವಿವಿಧ ಯೋಜನೆಗಳು ಕಾರ್ಯಕ್ರಮದಲ್ಲಿ ಬಿಲ್ ಪಾವತಿ ಮಾಡುವಾಗ ಲಂಚ ಪಡೆಯವಾಗ ರಾಜ್ಯ ದಲ್ಲಿ ಹಲವಾರು ಗ್ರಾಮ ಪಂಚಾಯತಿ ಅಧ್ಯಕ್ಷರು ಲೋಕಾಯತ್ತ ಬಲೆಗೆ ಬಿದ್ದಿದ್ದಾರೆ ಇನ್ನೂ ಹಲವಾರು ಪ್ರಕರಣಗಳಲ್ಲಿ ವಿಳಂಬವಾಗಿ ಬಿಲ್ ಪಾವತಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ರಾಜ್ಯ ದಲ್ಲಿ ೫೯೬೩ ಗ್ರಾಮ ಪಂಚಾಯತಿಗಳಿವೆ ಹಾಗೂ ೯೧೪೩೭ ಗ್ರಾಮ ಪಂಚಾಯತಿ ಸದಸ್ಯರು ಇದ್ದಾರೆ ನಾವು ಚುನಾಯಿತ ಪ್ರತಿ ನಿಧಿಗಳು ನಮ್ಮ ಅಧಿಕಾರ ಮೊಟಕು ಗೊಳಿಸುವ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ನಡೆ ಈ ಕುರಿತು ರಾಜ್ಯದ ಎಲ್ಲಾ ಸದಸ್ಯರು ಕೂಡಿ ಸರ್ಕಾರದ ವಿರುದ್ಧ ಹೋರಾಟದ ರೂಪ ರೇಷೆಗಳನ್ನು ಮಾಡುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದ ಯಲಗೋಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಮ್ಮದ ರಫೀಕ್ ಕಣಮೇಶ್ವರ ಅವರು ಹೇಳಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.