“ಸಿಹಿ ಕಹಿ” ಸುದ್ದಿ ಸಾಧಕನಿಗೊಂದು ಸಲಾಂ.
![](https://i0.wp.com/sknewskannada.in/wp-content/uploads/2024/07/IMG-20240702-WA0115.jpg?resize=708%2C932&ssl=1)
ಸಿಹಿ ಕಹಿ ಸಮರಸವೇ ಜೀವನ.
ಸಿಹಿ ಕಹಿ ಶುಭೋದಯದಿ
ಮನೆ ಮನೆಗೆ ಹರುಷದಿ ಬರುವೆ
ಮನ ಮನದಿ ಅತಿಥಿ
ಅನುದಿನ ಸುದ್ಧಿ ಸಾರ
ಪ್ರಚಲಿತ ವಿಶ್ವದ ವಿಷಯ ಹೊತ್ತು ತರುವೆ
ನಿತ್ಯ ಸತ್ಯ ಸುಂದರ ಬರಹ
ಭ್ರಷ್ಟರಿಗೆ ಇರಿತ
ಶಿಷ್ಠ ನಿಷ್ಠರಿಗೆ ರಕ್ಷಿಪ
ಸರ್ವರಿಗೂ ಸಮಪಾಲು
ಸಮಬಾಳು ನ್ಯಾಯ
ನೀತಿಗೆ ಸಿಹಿ ಕಹಿ ಸುದ್ಧಿ ವಾಹಿನಿಗೆ ಮಾರುತಿ
ಹೊಸಮನಿ ಸಾರಥಿ ಬಾಗಲಕೋಟ ಸುದ್ಧಿ
ಲೋಕದ ಕಿರೀಟ
ಸಿಹಿ ಕಹಿ ಬೇಕು
ಬದುಕಿನ ಬೆಳಕು
ಭವ ಸಾಗರ ಪಯಣ
ಸುಮನಗಳಿಗೆ ಅಮೃತಧಾರೆ
ಸಿಹಿ ಸುದ್ದಿಗೆ ಹಿಗ್ಗದದೇ
ಕಹಿ ಕಠೋರ ನುಡಿಗೆ ಕುಗ್ಗದೆ
ಸೊರಗದೆ ನಡೆ ನಡೆ
ನೀ ಭಯವಿಲ್ಲದೇ
ಸರ್ವರಿಗೂ ಸದಾ ಸಿಹಿ ಕಹಿ
ಸಮರಸವೇ ಜೀವನ
ಸಾರ ಸಜ್ಜನರ ಹರುಷ ಆನಂದೋತ್ಸವ
ಸಾರ್ಥಕ ಪತ್ರಿಕೊಧ್ಯಮದ ಹೆಮ್ಮೆ
ಸಿಹಿ ಕಹಿ ನಿನಗೆ ನೀನೇ ಸಾಟಿ
ಸಿಹಿ ಕಹಿ ಕರುನಾಡ ಮುದ್ದು ಕಂದ
ಅಕ್ಷರ ಖಡ್ಗ ಲೇಖನಿ ಹೊಳಪಿರಲಿ
ನೊಂದವರಿಗೆ ಸಿಹಿ
ಗರ್ವತೋರುವಂಗೆ ಕಹಿ
ಚಿರವಾಗಿರು ಭುವನೇಶ್ವರಿ ಮಡಿಲಲಿ
ಸಿಹಿ ಕಹಿ ಸುದ್ಧಿ
ಸಾಧಕನಿಗೊಂದು ಸಲಾಂ.
ಅಕ್ಷರ ಸ್ನೇಹಿ-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ.
ಬಾಗಲಕೋಟೆ.
8618674872