ಕೊಟ್ಟೂರು ತಾಲೂಕಾ ಘಟಕದ ವತಿಯಿಂದ ಮೊದಲನೇ ಪತ್ರಿಕಾ ದಿನಾಚರಣೆ ಕಾರ್ಯಕ್ರಮ.
ಕೊಟ್ಟೂರು ಜು.05
![](https://i0.wp.com/sknewskannada.in/wp-content/uploads/2024/07/IMG-20240705-WA0072.jpg?resize=708%2C469&ssl=1)
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಮುರುಗೇಶ್ ಬಿ ಶಿವಪೂಜೆ, ಹಗರಿ ಬೊಮ್ಮನಹಳ್ಳಿಯ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯಕ್, ಕೆಎಂಎಫ್ ರಾಜ್ಯಾಧ್ಯಕ್ಷರು ಎಸ್ ಭೀಮ ನಾಯಕ್, ಕೂಡ್ಲಿಗಿ ಕ್ಷೇತ್ರದ ಶಾಸಕರು ಎನ್ ಟಿ ಶ್ರೀನಿವಾಸ್, ಮುಂಡರಗಿ ನಾಗರಾಜ್ ಬಾಬು ಜಗಜೀವನ್ ರಾಮ ಮತ್ತು ಚರ್ಮ ಕೈಗಾರಿಕಾ ಅಭಿವೃದ್ಧಿ ಅಧ್ಯಕ್ಷರು ಬೆಂಗಳೂರು ಇವರುಗಳು ಆಗಮಿಸಲಿದ್ದು. ಕರ್ನಾಟಕ ಪತ್ರಕರ್ತರ ಸಂಘ, ಕೊಟ್ಟೂರು ಘಟಕದ ವತಿಯಿಂದ ಬಾಲಾಜಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ತಾಲೂಕು ಪತ್ರಿಕಾ ದಿನಾಚರಣೆ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯ 06.07.2024 ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪ್ರತಿಭಾವಂತ ವಿದ್ಯಾರ್ಥಿಗಳು ಕುಟುಂಬಸ್ಥರು ಸಂಘಟನೆಗಳು ,ವಿವಿಧ ಸಮಾಜ ಸೇವಕರು, ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಸರ್ವ ಸದಸ್ಯರು ಕುಟುಂಬ ಸಮೇತವಾಗಿ ಆಗಮಿಸುವಂತೆ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಡಿ ಸಿದ್ದಪ್ಪ ಕೋರಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು