ಜನ ಸಂಖ್ಯೆಯಿಂದ ತುಂಬಿದ ಕಂಪ್ಲಿಯ ಜನತಾ ದರ್ಶನ.
ಕಂಪ್ಲಿ ಜು.05
![](https://i0.wp.com/sknewskannada.in/wp-content/uploads/2024/07/IMG-20240705-WA0088.jpg?resize=708%2C818&ssl=1)
ಇಂದು ಕಂಪ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು. ಶಾಸಕ ಶ್ರೀ ಜೆ ಎನ್ ಗಣೇಶ ತಹಸೀಲ್ದಾರ್ ಶ್ರೀ ಶಿವರಾಜ್. ಮುಖ್ಯಾಧಿಕಾರಿ ಶ್ರೀ ದುರ್ಗಪ್ಪ ಉಪಸ್ಥಿತಿಯಲ್ಲಿ 1) ಕಂಪ್ಲಿ ಕೈಗಾರಿಕೆ ಸಂಘಕ್ಕೆ 25 ಎಕರೆ ಜಮೀನು ಹಸ್ತಾಂತರ ಬಗ್ಗೆ ವಿವರಣೆ 2) ಐತಿಹಾಸಿಕ ಸೋಮೇಶ್ವರ ಕೆರೆ ಕಂಪ್ಲಿ 48 ಎಕರೆ ಸರ್ಕಾರಿ ಹಳ್ಳಗಳು ಕಾಣೆಯಾಗಿದ್ದಾವೆ ಎಂಬುದರ ಬಗ್ಗೆ ವಿವರಣೆ 3) ಸೋಮೇಶ್ವರ ಕೆರೆ ಒತ್ತುವರಿ ಬಗ್ಗೆ ವಿವರಣೆ 4) ಕಂಪ್ಲಿಯ ನಂಬರ್ 10 ಮುದ್ದಾಪುರ ಮತ್ತು ಕಣಿವೆ ತಿಮ್ಮಲಾಪುರದ ಧರ್ಮ ಕೆರೆ ವಿಟ್ಲಾಪುರ ಕೆರೆ ಅನಧಿಕೃತ ಪಂಪ್ ಸೆಟ್ ಬೆಳೆ ಹಾನಿ ಪರಿಹಾರವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಂಬಳದಿಂದ ಪರಿಹಾರ ನೀಡುವ ಬಗ್ಗೆ 5) ಸತ್ಯನಾರಾಯಣಪೇಟೆ ಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಎಕರೆ ಜಮೀನಿನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡವನ್ನು ತೆರವುಗೊಳಿಸುವ ಬಗ್ಗೆ 6) ಶಿಕ್ಷಣ ಇಲಾಖೆಯ ನಿಯಮ ನಿಬಂಧನೆಗಳನ್ನು ಮೀರಿ ಶಾಲೆಗಳನ್ನು ನಡೆಸುತ್ತಿರುವ ಖಾಸಗಿ 4 ಶಾಲೆಗಳ ಬಗ್ಗೆ ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಮತ್ತು ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಅಧ್ಯಕ್ಷ ಟಿ ಹೆಚ್ ಎಂ ರಾಜ್ ಕುಮಾರ್ ಮತ್ತು ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ಹೆಚ್ ಗೋಪಾಲ್ ಉಪಾಧ್ಯಕ್ಷ ಎಚ್ ಶ್ರೀನಿವಾಸ್ ಮತ್ತು ಕಂಪ್ಲಿ ಕೈಗಾರಿಕಾ ಸಂಘದ ಇಮ್ತಿಯಾಜ್. ಉಪಾಧ್ಯಕ್ಷ ಜೆಸಿ ನಾಗರಾಜ್ ರೆಹಮತ್ ಮುಲ್ಲಾ ಉಪಸ್ಥಿತಿಯಲ್ಲಿ ಮನವಿಯನ್ನು ಕೊಡಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಜಕುಮಾರ್.ಟಿ.ಎಚ್.ಎಮ್. ಬಳ್ಳಾರಿ.