ಮೊಹರಂ ಹಬ್ಬದ ಶಾಂತಿ ಯುತವಾಗಿ ಆಚರಣೆ ಮಾಡಲು ಪೂರ್ವ ಭಾವಿ ಸಭೆ.

ಕಂಪ್ಲಿ ಜು .08

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಕಂಪ್ಲಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆದ ಶ್ರೀ ವಸುಕುಮಾರ್ ಇವರ ನೇತೃತ್ವದಲ್ಲಿ ಮೊಹರಂ ಹಬ್ಬದ ಆಚರಣೆಯ ಶಾಂತಿ ಸಭೆ ಹಮ್ಮಿ ಕೊಂಡಿದ್ದು ಕಂಪ್ಲಿ ಪಟ್ಟಣದ ಸರ್ವ ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆದಿದ್ದು. ಸಭೆಯಲ್ಲಿ ಮೊಹರಂ ಆಚರಣೆಯು ಹಿಂದೂ ಮುಸ್ಲಿಮಗಳ ಭಾವೈಕ್ಯತೆಯ ಆಚರಣೆಯಾಗಿದ್ದು.

ಅಹಿತಕರ ಘಟನೆಗಳಿಗೆ ಅವಕಾಶ ನೀಡಿದಂತೆ ಅವಶ್ಯಕತೆಗೆ ತಕ್ಕಂತೆ ಕಾನೂನು ಬದ್ಧವಾಗಿ ಸಂಬಂಧಪಟ್ಟ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ಪಡೆದು ಆಚರಣೆ ಮಾಡಿ ಮತ್ತು ಕೋಮು ಗಲಭೆಗೆ ಅವಕಾಶ ನೀಡಿದಂತೆ ಶಾಂತಿ ಯುತವಾಗಿ ಆಚರಿಸಲು ಮುಖಂಡರ ಜೊತೆಗೆ ಪೋಲಿಸ್ ಇನ್ಸ್ಪೆಕ್ಟರ್ ಮತ್ತು ಅವರ ಸಿಬ್ಬಂದಿಗಳ ಸಹಕಾರ ದೊಂದಿಗೆ ಆಚರಿಸಿ ಎಂದು ಸರ್ವರ ಒಪ್ಪಿಗೆ ಮೇರೆಗೆ ಶಾಂತಿ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು ಸಭೆಯಲ್ಲಿ ಹೆಮಯ್ಯ ಸ್ವಾಮಿ. ಬ್ರಹ್ಮಯ್ಯ. ಮಸ್ತಾನ್ ಹುಸೇನಪ್ಪ ಮೆಹಬೂಬ್ ಟಿ ಹೆಚ್ ಎಂ ರಾಜಕುಮಾರ ಪತ್ರಕರ್ತರೊಂದಿಗೆ ಇನ್ನಿತರೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ್.ಬಳ್ಳಾರಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button