ಗ್ರಾಮೀಣ ಕುಡಿಯುವ ನೀರು ಮತ್ತು ನಗರ ನೀರು ಮತ್ತು ಸರಬರಾಜು ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ – ಶಾಸಕ ಕಾಶಪ್ಪನವರ.
ಹುನಗುಂದ ಜು.10

ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ೧೫೮ ಶುದ್ದ ಕುಡಿಯುವ ನೀರು ಘಟಕಗಳಲ್ಲಿ ಬಹತೇಕ ಘಟಕಗಳು ದುರಸ್ಥಿಯಲ್ಲಿದ್ದು. ಅವುಗಳನ್ನು ದುರಸ್ಥಿ ಗೊಳಿಸುವಂತೆ ಕಳೆದ ಕೆಡಿಪಿ ಸಭೆಯಲ್ಲಿ ಹೇಳಿದ್ದರೂ ದುರಸ್ಥಿಗೆ ಕ್ರಮ ವಹಿಸದೇ ಇರುವ ಗ್ರಾಮೀಣ ಕುಡಿಯುವ ನೀರು ಹಾಗೂ ಸರಬರಾಜು ಇಲಾಖೆಯ ಎಇಇ ರಾಘವೇಂದ್ರ ಪುರೋಹಿತ ಮತ್ತು ಇಳಕಲ್ಲ ನಗರದಲ್ಲಿ ಕ್ರೀಡಾಂಗಣ ಜಾಗೆಯಲ್ಲಿ ಸಂಬಂಧಿಸಿದ ಇಲಾಖೆಯ ಅನುಮತಿಯಿಲ್ಲದೇ ಕುಡಿಯುವ ನೀರಿನ ಟ್ಯಾಂಕರ್ ಕಾಮಗಾರಿ ಕೈಕೊಂಡ ಎಡಬ್ಲೂಎಸ್ ಮಹಿಳಾ ಅಧಿಕಾರಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಸಭೆಯಲ್ಲಿ ತರಾಟೆಗೆ ತಗೆದುಕೊಂಡು ಘಟನೆ ನಡೆಯಿತು.ಬುಧವಾರ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ವಿವಿಧ ಇಲಾಖೆಯ ತ್ರೈಮಾಸಿಕ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು, ಅವಳಿ ತಾಲೂಕಿನಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಜೆಜೆಎಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದಿದ್ದು. ಅವಳಿ ತಾಲೂಕಿನ ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಸಲು ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾಗಿರುವ ೧೫೮ ಶುದ್ದ ಕುಡಿಯುವ ನೀರಿನ ಘಟನೆಗಳನ್ನು ರಿಪೇರಿ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಂಡಿ ಎಂದು ಹೇಳಿತ್ತು ಏನು ಮಾಡಿದೀರಿ ? ಎಂದು ಶಾಸಕರು ಆರ್ಡಬ್ಲೂಎಸ್ ಎಇಇ ಪುರೋಹಿತರನ್ನು ಕೇಳಿದಾಗ ಸರಿಪಡಿಸಲಾಗುತ್ತಿದೆ ಎಂದು ಹೇಳುತ್ತಿದಂತೆ ವಿವಿಧ ಹಳ್ಳಿಯ ಸಾರ್ವಜನಿಕರು ನಮ್ಮೂರಲ್ಲಿ ಒಂದು ವರ್ಷದಿಂದ ನೀರಿನ ಘಟಕ ಬಂದ್ ಎಂದು ಹೇಳುತ್ತಿದಂತೆ ಗರಂ ಗೊಂಡ ಶಾಸಕರು ಪುರೋಹಿತ ಅವರನ್ನು ತರಾಟೆಗೆ ತಗೆದುಕೊಂಡು ಅವುಗಳನ್ನು ಮೊದಲು ಸರಿಪಡಿಸುವ ಕಾರ್ಯವನ್ನು ಮಾಡಿ ಎಂದು ಖಡಕ್ ವಾರ್ನಿಂಗ್ ಮಾಡಿದರು. ಇನ್ನು ಇಳಕಲ್ಲ ನಗರದಲ್ಲಿ ಮೊದಲು ಇದ್ದ ಕುಡಿಯುವ ನೀರಿನ ಟ್ಯಾಂಕರ್ನ್ನು ಹೊಡೆದು ಹಾಕಿ ಬೇರೆಡೆಗೆ ಸಂಬಂಧಿಸಿದ ಕ್ರೀಡಾ ಇಲಾಖೆಯ ಅನುಮತಿಯನ್ನು ಪಡೆಯದೇ ಕಾಮಗಾರಿಯನ್ನು ಆರಂಭಿಸುತ್ತಿರುವ ಎಡಬ್ಲೂಎಸ್ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡು ಆ ಜಾಗೆ ೨೦೧೮ ರಲ್ಲಿ ಕ್ರೀಡಾಂಗಣ ಹೆಸರಿಗೆ ಹಸ್ತಾಂತರವಾಗಿದ್ದರೂ ಅವರುಗಳ ಅನುಮತಿಯನ್ನು ಕೇಳದೇ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ಮಾತನ್ನು ಕೇಳಿ ಅನಧೀಕೃತವಾಗಿ ಕಾಮಗಾರಿ ನಡೆಸಿದ್ದೀರಲ್ಲ ನಾನು ಹೇಳಿತ್ತೀನಿ ಅದರಂಗ ಮಾಡ್ತೀರಾ ಎಂದು ಕೇಳಿದಕ್ಕೆ ಎಡಬ್ಲೂಎಸ್ ಅಧಿಕಾರಿ ತುಟಿ ಪಿಟಕೆನ್ನದೇ ಸುಮ್ನೆ ನಿಂತ ಘಟನೆ ನಡೆಯಿತು.ಇನ್ನು ಕೃಷಿ ಇಲಾಖೆಯ ಅಧಿಕಾರಿ ಸೊಂಲಿಂಗಪ್ಪ ಅಂಟರತಾಣಿ ಕಳೆದ ಸಭೆಯ ಅನುಪಾಲನ ವರದಿಯನ್ನು ಹೇಳಿದೇ ಇರುವುದ್ದಕ್ಕೆ ಮತ್ತು ಬೆಳೆ ಪರಿಹಾರದ ಬಗ್ಗೆ ಸರಿಯಾದ ಮಾಹಿತಿಯನ್ನು ಸಭೆಗೆ ಹಾಜರ ಪಡಿಸದೇ ಇರೋದರಿಂದ ಸರಿಯಾದ ಮಾಹಿತಿಯೊಂದಿಗೆ ಸಭೆಗೆ ಬರುವಂತೆ ಖಡಕ್ ಎಚ್ಚರಿಕೆ ನೀಡಿದರು. ಪಶು ಸಂಗೋಪನ ಇಲಾಖೆಯ ಎಡಿ ಎಸ್.ಪಿ ಬೇನಾಳ ಸರ್ಕಾರದ ಯೋಜನೆಯ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ನೀಡದಿದ್ದಕ್ಕೆ ಸರ್ಕಾರದ ಯೋಜನೆಗಳ ಬಗ್ಗೆ ಉತ್ತಮ ಅಭಿಪ್ರಾಯ ಇರಬೇಕು ಅದರ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ ಎಂದು ಅವರಿಗೆ ತಿಳಿಸಿದರು. ಕೆಎಸ್ಆರ್ಟಿಸಿ ಅವರಿಗೆ ಶಾಲೆಯ ಸಮಯಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಬಸ್ ಬಿಡುವಂತೆ ತಿಳಿಸಿದರು. ಲ್ಯಾಂಡ್ ಆರ್ಮಿ ಇಲಾಖೆಯಡಿಯಲ್ಲಿ ನಾಗೂರ ಗ್ರಾಮದಲ್ಲಿ ೨೦೧೫-೧೬ ರಲ್ಲಿ ನಿರ್ಮಿಸಲಾದ ಡಾ. ಬಿ. ಆರ್. ಅಂಬೇಡ್ಕರ ಭವನ ಇಲ್ಲಿವರಿಗೂ ಉದ್ಘಾಟನೆ ಯಾಗದೇ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂದು ನಾಗೂರ ಗ್ರಾಮದವರು ಶಾಸಕರಿಗೆ ತಿಳಿಸಿದಾಗ ಗರಂ ಗೊಂಡ ಶಾಸಕರು ಯಾಕೆ ? ಇಲ್ಲಿವರಿಗೂ ಉದ್ಘಾಟಿಸಿಲ್ಲ ಎಂದು ಕೇಳಿದಾಗ ಎಲ್ಲಾ ರೆಡಿ ಇದೆ ಸಧ್ಯದಲ್ಲಿ ಉದ್ಘಾಟನೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದಾಗ ಮೊದಲು ಅದರ ಸ್ಥಿತಿ ಗತಿಯನ್ನು ನೋಡಿ ಉದ್ಘಾಟನೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ತಾ.ಪಂ ಆಡಳಿತಾಧಿಕಾರಿ ಎನ್. ವಾಯ್. ಬಸರಿಗಿಡದ, ತಹಶೀಲ್ದಾರ ನಿಂಗಪ್ಪ ಬಿರಾದಾರ, ತಾ.ಪಂ ಇಓ ಮುರಳೀಧರ ದೇಶಪಾಂಡೆ, ಗ್ರೇಡ್-೨ ತಹಶೀಲ್ದಾರ ಈಶ್ವರ ಗಡ್ಡಿ,ಕೆಡಿಪಿ ಸದಸ್ಯರಾದ ಶೇಖರಪ್ಪ ಬಾದವಾಡಗಿ, ಶಾಂತಣ್ಣ ಸುರಪೂರ, ಜಬ್ಬಾರ ಕಲಬುರ್ಗಿ, ಮಲ್ಲಿಕಾರ್ಜುನ ಲೆಕ್ಕಿಹಾಳ, ಚಂದಪ್ಪ ಮಾದರ, ವಿಜಯ ಮಹಾಂತೇಶ ಗದ್ದನಕೇರಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ ಎಂ ಬಂಡರಗಲ್ಲ ಹುನಗುಂದ.