“2023/23 ನೇ ಸಾಲಿನ ಎಸ್.ಸಿ/ಪಿ- ಟಿ.ಎಸ್/ಪಿ ಅನುದಾನ ದುರ್ಬಳಕೆ ಆರೋಪ”.

ಮಸ್ಕಿ ಜು.11

2022-23 ನೇ ಸಾಲಿನ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯ ಹಣವನ್ನು ದುರ್ಬಳಕೆ ಮತ್ತು ಕೈಗೊಂಡ ಕಾಮಗಾರಿ ಕಳಪೆ ಮಾಡಿರುವ ಗುತ್ತೇದಾರ ದೇವರಾಜ ಗಣದಿನ್ನಿ ಇವರ ಲೈಸನ್ಸನ್ನು ಕಪ್ಪು ಪಟ್ಟಿಗೆ ಸೇರಿಸುವ ಮತ್ತು ರಸ್ತೆ ಕಳಪೆಗೆ ಕಾರಣರಾದ ಸಹಾಯಕ ಇಂಜನೀಯರ್ ಹಾಗೂ ಮೂರನೇ ಪಾರ್ಟಿ ವರದಿ ನೀಡಿದ ಎಜೆನ್ಸಿ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಎಂದು ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪುರ ದಲಿತ ಸಂರಕ್ಷ ಸಮಿತಿ ಜಿಲ್ಲಾ ಸಂಘಟನೆಯಿಂದ ಜಿಲ್ಲಾ ಪಂಚಾಯತ ರಾಯಚೂರ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ವಿಭಾಗ ಮಾನವಿ ರವರು ಆಡಿದ್ದೇ ಆಟ, ಇವರ ಅವಧಿಯಲ್ಲಿ ಭಾರಿ ಗಾತ್ರದ ಭ್ರಷ್ಟಚಾರ ಆಗಿದೆ. ಈ ಕಾಮಗಾರಿ ನ್ಯಾಯಯುತವಾಗಿ ಟೆಂಡರ್ ಕರೆದಿಲ್ಲ. ಅತಿ ಹೆಚ್ಚು ಪರ್ಸೆಂಟೇಜ ಹಣ ಕೊಟ್ಟವರಿಗೆ ಕಾಮಗಾರಿಯನ್ನು ಅಗ್ರಿಮೆಂಟ್ ಮಾಡಿದ್ದಾರೆ. ಮಾನ್ವಿ ಎಇಇ ಭಾರಿ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದು ಕಂಡು ಬಂದಿದೆ. ಇವರ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತನಿಖೆ ಮಾಡಿಸ ಬೇಕು. ಇವರ ಅವಧಿಯಲ್ಲಿ ನಡೆದ ಕಾಮಗಾರಿಗಳು ಆರು ತಿಂಗಳಲ್ಲಿ ಕಿತ್ತು ಹೋಗಿವೆ. ಬರೀ ಪರ್ಸಂಟೇಜ್ ಗೆ ಮಹತ್ವ ನೀಡುವ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗವನ್ನು ಅಭಿವೃದ್ಧಿಪಡಿಸಲು ಅವರಿಗಾಗಿ ಮೀಸಲು ಇಟ್ಟಂತ ಹಣವನ್ನು ಅನ್ಯ ಕೆಲಸಕ್ಕೆ ಉಪಯೋಗ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯ ಮಾಡಿದಂತಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ನಾರಾಯಣನಗರ ಕ್ಯಾಂಪಿನಿಂದ ಹಾಲಾಪೂರ ಗ್ರಾಮದವರೆಗೆ ಸುಮಾರು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಹಣವನ್ನು ರಸ್ತೆ ಕಾಮಗಾರಿಗೆ ಇಟ್ಟಿದ್ದಾರೆ. ಈ ರಸ್ತೆಯು ಮಾಡ ಬೇಕಾದರೆ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರು ವಾಸಿಸುತ್ತಿರ ಬೇಕು. ಹಾಗೂ ಈಗಾಗಲೇ ಈ ರಸ್ತೆ ಕಾಮಗಾರಿಗೆ ಆರು ವರ್ಷಗಳಲ್ಲಿ ಲೋಕೋಪಯೋಗಿ ಇಲಾಖೆಯವರು ಎರಡು ಸಲ ರಸ್ತೆ ಕಾಮಗಾರಿ ಮಾಡಿದ್ದರು.

ಮತ್ತೆ ಅದೇ ರಸ್ತೆ ಕೆಲಸಕ್ಕೆ ಎಸ್.ಸಿ.ಪಿ/ಟಿ.ಎಸ್.ಪಿ ಹಣವನ್ನು ಬಳಸುತ್ತಿರುವುದು ಆ ಸಮಾಜಕ್ಕೆ ದ್ರೋಹವನ್ನು ಬಗೆದಾಗೆಯೇ ಮತ್ತು ಭ್ರಷ್ಟಚಾರಕ್ಕೆ ಸರ್ಕಾರದ ಅಧಿಕಾರಿಗಳೇ ಬೆಂಬಲ ನೀಡುವಂತಾಗಿದೆ. ಈಗಾಗಲೇ ಕಾಮಗಾರಿ ಮುಗಿಸಿದ್ದು, ಹಳೆಯ ಡಾಂಬರನ್ನು ಸರಿಯಾಗಿ ಕಿತ್ತಿಲ್ಲ. ಅರ್ಧಮರ್ದ ಕಾಮಗಾರಿ ಮಾಡಿ. ಸಮತಟ್ಟು ಮಾಡದೇ ನೇರವಾಗಿ 40 ಎಂ.ಎಂ ಕಂಕರ ತೆಳ್ಳಗೆ ಹಾಕಿದ್ದಾರೆ. ಕೆಲವು ಕಡೆ 20 ಎಂ.ಎಂ ಕಂಕರ ಹಾಕಿದ್ದಾರೆ. ಕಾಮಗಾರಿಯ ವಿವರ ನಾಮಫಲಕ ಹಾಕಿಲ್ಲ, ರಸ್ತೆಯ ಅಂದಾಜು ಪಟ್ಟಿಯ ಪ್ರಕಾರ ಮಾಡದೇ ಉದ್ದ ಮತ್ತು ಅಳತೆಯ ಪ್ರಕಾರ ಕಾಮಗಾರಿ ಮಾಡಿಲ್ಲ. ಆದ್ದದರಿಂದ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ಮಾಡದೇ ಇರುವುದರಿಂದ ಡಾಂಬರ ಕಿತ್ತು ಹೋಗಿದೆ. ಆದುದರಿಂದ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಹಾಗೂ ಸಂಭಂದಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ ದಾಖಲಿಸಿ ತಪ್ಪಿತಸ್ಥರನ್ನು ಸೇವೆಯಿಂದ ಅಮಾನತು ಮಾಡ ಬೇಕೆಂದು ಮತ್ತು ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತೇದಾರರ ಲೈಸೆನ್ಸನ್ನು ಕಪ್ಪು ಪಟ್ಟಿಗೆ ಸೇರಿಸ ಬೇಕೆಂದು ನಮ್ಮ ಸಂಘಟನೆಯು ಒತ್ತಾಯಿಸುತ್ತದ ಎಂದು ಬಾಲಸ್ವಾಮಿ ಜಿನ್ನಾಪೂರ ಜಿಲ್ಲಾಧ್ಯಕ್ಷರು ದಲಿತ ಸಂರಕ್ಷ ಸಮಿತಿ ರಾಯಚೂರು ಇವರು ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ ರಾಜ್ ಇಂಜನೀಯರಿಂಗ್ ಇಲಾಖೆ ರಾಯಚೂರ ಉಪ ವಿಭಾಗ ಕಚೇರಿಯಲ್ಲಿ ಕ್ರಮ ಜರುಗಿಸಲು ಪತ್ರದ ಮೂಲಕ ಒತ್ತಾಯಿಸಿದ್ದಾರೆ.ಒಂದು ವೇಳೆ ಕ್ರಮ ಜರುಗಿಸದೇ ಹೋದಲ್ಲಿ ತಮ್ಮ ಕಚೇರಿಯ ಮುಂಭಾಗ ಅನಿರ್ದಿಷ್ಟ ಧರಣಿ ಕೈಗೊಳ್ಳ ಬೇಕಾಗುತ್ತದೆ ಎಂದು ಪತ್ರಿಕೆಯ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button