ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಗಲು ದರೋಡೆಗೆ ಕಡಿವಾಣ ಯಾವಾಗ? – ಬಿ.ಮರಿಸ್ವಾಮಿ.

ಕೊಟ್ಟೂರು ಜು.11

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ದಿನಾಂಕ 10 ಜುಲೈ 2024 ರಂದು ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಅಮರೇಶ್ ಜಿ ಕೆ ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು.ಪ್ರಾಥಮಿಕ ಮತ್ತು ಪ್ರೌಢಶಾಲೆಯ ನಮ್ಮ ವ್ಯಾಪ್ತಿಗೆ ಬರುತ್ತಿದ್ದು, ಕಾಲೇಜಿನ ವ್ಯಾಪ್ತಿ ಡಿ.ಡಿ.ಪಿ.ಐ. ಇವರ ವ್ಯಾಪ್ತಿಗೆ ಬರುತ್ತಿರುವ ಕಾರಣ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಂಸ್ಥೆಯವರನ್ನು ಆಹ್ವಾನಿಸಲಾಗಿದೆ. ಆದರೆ ಇಲ್ಲಿ ಶಾಲಾ ಕೆಲ ಶಿಕ್ಷಕರು ಹಾಗೂ ಮುಖ್ಯ ಗುರುಗಳು ಮಾತ್ರ ಬಂದಿದ್ದಾರೆ. ಆದರೆ ಕಾಲೇಜಿನ ಪ್ರಾಂಶುಪಾಲರು ಮತ್ತು ಎಲ್ಲಾ ಸಂಸ್ಥೆಯ ಮುಖ್ಯಸ್ಥರು ಅಥವಾ ಆಡಳಿತ ಮಂಡಳಿಯವರು ಬಂದಿಲ್ಲ ಇದು ಸಮಾಂಜಸವಲ್ಲದ ಸಭೆಯಾಗಿದೆ. ದಯವಿಟ್ಟು ಮುಂದಿನ ಸಭೆಯಲ್ಲಿ ಎಲ್ಲರೂ ಇರಬೇಕು ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆ ಮುಂಭಾಗ ತೆಗೆದು ಕೊಳ್ಳುವ ಫೀ ಪ್ರದರ್ಶನ ಮಾಡಬೇಕು ಮತ್ತು ಪರೀಕ್ಷೆ ಸಮಯದಲ್ಲಿ ಫೀ ನೆಪ ಮಾಡಿ ವಿದ್ಯಾರ್ಥಿಗಳಿಗೆ ಅವಮಾನ ಮಾಡ ಬಾರದು ಅಂದರೆ ಎಲ್ಲಾ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರ ನಿಗದಿ ಪಡಿಸಿದ ಫೀಯನ್ನು ತೆಗೆದು ಕೊಳ್ಳಿ ಇಲ್ಲದಿದ್ದರೆ ನಮ್ಮ ಎಲ್ಲಾ ಸಂಘಟನೆಯಿಂದ ಉಗ್ರವಾದ ಹೋರಾಟ ನಡೆಸ ಬೇಕಾಗುತ್ತದೆ ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿ ಹೇಳಿದರು. ವಿದ್ಯಾರ್ಥಿಗಳ ಫೀ ಜೊತೆಗೆ ತರಗತಿಗೆ ತಕ್ಕಂತೆ ಶಾಲಾ ಬ್ಯಾಗ್ ತೂಕ ಕಡಿಮೆ ಗೊಳಿಸಿ ಎಂದು ಕೆ ಎಸ್ ಜಯಪ್ರಕಾಶ್ ತಿಳಿಸಿದರು.ಸಭೆಯಲ್ಲಿ ಡಿಎಸ್ಎಸ್ ಜಿಲ್ಲಾ ಮುಖಂಡರಾದ ಬದ್ದಿ ಮರಿಸ್ವಾಮಿ,ಸಿಪಿಐ(ಎಂಎಲ್) ಲಿಬಿರೇಷನ್ ಪಕ್ಷದ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ, ಎಐಎಸ್ಎ ಸಂಘದ ರಾಜ್ಯ ಸಂಚಾಲಕ ಸಂತೋಷ್ ಗುಳಿದಟ್ಟಿ, ರೈತ ಮುಖಂಡರಾದ ಭರಮಪ್ಪ, ಜಯಪ್ರಕಾಶ್ ನಾಯ್ಕ ಹಾಗೂ ಇತರೆ ಸಂಘಟನೆಯವರು.ಸರ್ಕಾರದ ಆರ್.ಟಿ.ಇ. ನಿಯಮದಂತೆ ಫೀಯನ್ನು ವಸೂಲಿ ಮಾಡಬೇಕು. ನಿಯಮ ಬಾಹಿರವಾಗಿ ಅನಾವಶ್ಯಕ ಹೆಚ್ಚಿನ ಫೀ ವಸೂಲಿ ಮಾಡುವ ಬಗ್ಗೆ ದೂರುಗಳು ಬಂದಲ್ಲಿ ನಿಯಮಾನುಸಾರ ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರರು ಎಚ್ಚರಿಸಿದರು.ಸಭೆಯಲ್ಲಿ ಇಸಿಒ ಎಸ್ ನಿಂಗಪ್ಪ, ಅಜ್ಜಪ್ಪ ಸಿಆರ್ಪಿ ಪಟ್ಟಣದ ಖಾಸಗಿ ಶಾಲೆಗಳ ಮುಖ್ಯ ಗುರುಗಳು ಹಾಜರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button