ಕೊಟ್ಟೂರು ಕಾಲೇಜಿನ ವನ ಮಹೋತ್ಸವ ಕಾರ್ಯಕ್ರಮ.
ಕೊಟ್ಟೂರು ಜು.11

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಪಟ್ಟಣದ ಕೊಟ್ಟೂರೇಶ್ವರ ಮಹಾ ವಿದ್ಯಾಲಯ ಕೊಟ್ಟೂರು ದಿನಾಂಕ 10/7/2024 ರಂದು ಕಾಲೇಜಿನ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗ ಹಾಗೂ IQAC .NCC .NSS ಮತ್ತು ಏಕೋ ಕ್ಲಬ್ ಸಂಯೋಗದೊಂದಿಗೆ ವನ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಮ್ ರವಿಕುಮಾರ್ ಇವರು ವನ ಮೋತ್ಸವದ ಆರಂಭ ಮತ್ತು ಅದರ ಉದ್ದೇಶ ಪರಿಸರ ಸಂರಕ್ಷಣೆಯ ಬೆಳವಣಿಗೆ ಅದರ ಕಾಳಜಿಯ ಬಗ್ಗೆ ವಿವರಿಸುತ್ತಾ ಪ್ಲಾಸ್ಟಿಕ್ ನ ದುಷ್ಪರಿಣಾಮಗಳು ಹಾಗೂ ಮನೆಗೊಂದು ಮರ ಊರಿಗೊಂದು ವನ ಎನ್ನುವ ಉದ್ದೇಶದೊಂದಿಗೆ ಮತ್ತು ಹಸಿರೆ ಉಸಿರು , ಉಸಿರೇ ಹಸಿರು ಎಂಬಂತೆ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ, ಅರಣ್ಯದಿಂದ ನಮಗಾಗುವ ಉಪಯೋಗಗಳಾದ ಗಾಳಿ ಮಳೆ ಬೆಳೆ ಮುಂತಾದವುಗಳ ಬಗ್ಗೆ ವಿವರಿಸುತ್ತಾ ವನ ಮಹೋತ್ಸವ ಕಾರ್ಯಕ್ರಮ ಫಾರೆಸ್ಟ್ ಫೆಸ್ಟಿವಲ್ ಇದು 1947ರ ಜುಲೈ ತಿಂಗಳಲ್ಲಿ ಪ್ರಾರಂಭವಾಯಿತು. ತದನಂತರ 1950 ರಿಂದ ಆಚರಣೆ ಜಾರಿಗೆ ತಂದರು. ಅಂದಿನಿಂದ ಪ್ರತಿ ವರ್ಷ ಜುಲೈ ತಿಂಗಳಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ. ಉದ್ಘಾಟಕರಾಗಿ ಆಗಮಿಸಿರುವಂತಹ ಹಸಿರು ಹೊನಲು ಬಳಗದ ಅಧ್ಯಕ್ಷರಾದ ಶ್ರೀ ಗುರು ಬಸವರಾಜ್ ರವರು ಪ್ಲಾಸ್ಟಿಕ್ ಬಳಕೆ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಇನ್ನು ಹೆಚ್ಚು ಹೆಚ್ಚಾಗಿ ಬರ ಬೇಕಾಗಿ ಮಕ್ಕಳಿಗೆ ತಿಳಿ ಹೇಳಿದರು. ವಿದ್ಯಾರ್ಥಿಗಳಾದ ಪ್ರಕೃತಿ ಭೂಮಿಕ ಕಾವ್ಯ ಆಯಾಲಿಯ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಈ ಐ.ಕ್ಯೂ. ಎ.ಸಿ ಕೋ ಆರ್ಡಿನೇಟರ್ ಡಾ. ಪೃಥ್ವಿರಾಜ್ .ಸಿ. ಇವರು ವನ ಮಹೋತ್ಸವ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಹಾಗೂ ಇದೇ ದಿನವನ್ನು ಜೇನುನೊಣ ರಕ್ಷಣೆ ದಿನವನ್ನಾಗಿ ಆಚರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಡಿ ರವೀಂದ್ರ ಗೌಡ, ದೈಹಿಕ ನಿರ್ದೇಶಕರಾದ ಡಾ. ಶಿವಕುಮಾರ್, ರಾಧಾ ಸ್ವಾಮಿ , ಬಿ.ಎಸ್. ಪಾಟೀಲ್, ವಿಜಯಲಕ್ಷ್ಮಿ ಸಜ್ಜನ್, ನಂದಿತಾ ,ಸಂಗೀತ, ಗಗನ ಶ್ರೀ, ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯಾದಕುಮಾರಿ ಚೈತ್ರ ಪ್ರಾರ್ಥಿಸಿದರೆ ಡಾ. ಪೃಥ್ವಿರಾಜ್ ವಂದಿಸಿದರು ವಿದ್ಯಾರ್ಥಿಗಳು ಪಾಲ್ಗೊಂಡು ಸಸಿ ನೆಡುವುದರ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.