ಕೆಡಿಪಿ ಸಭೆಯ ನೂತನ ಸದಸ್ಯರಾಗಿ ತಾ.ಪಂ ಮಾಜಿ ಸದಸ್ಯ – ಚಂದಪ್ಪ ಮಾದರ ಆಯ್ಕೆ.

ಹುನಗುಂದ ಜು .11

ತಾಲೂಕ ಮಟ್ಟದ ತ್ರೈಮಾಸಿಕ ಪ್ರಗತಿ (ಕೆಡಿಪಿ) ಪರಿಶೀಲನಾ ಸಮಿತಿಯ ನೂತನ ಸದಸ್ಯರಾಗಿ ಹೂವನೂರ ಗ್ರಾಮದ ತಾ.ಪಂ ಮಾಜಿ ಸದಸ್ಯ ಚಂದಪ್ಪ ಮಾದರ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ಚಿತ್ತರಗಿ ತಾ.ಪಂ ಸದಸ್ಯರಾಗಿ ಆಯ್ಕೆಯಾಗಿ ಐದು ವರ್ಷ ಕ್ರೀಯಾಶೀಲ ಸದಸ್ಯರಾಗಿ ತಮ್ಮ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಕೊಂಡ ಅವರನ್ನು ಹುನಗುಂದ ಮತ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಕೆಡಿಪಿ ಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ.

ನೂತನ ಕೆಡಿಪಿ ಸದಸ್ಯರಾಗಿ ಆಯ್ಕೆಯಾಗಿರುವ ಚಂದಪ್ಪ ಮಾದರ ಮಾತನಾಡಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ನನ್ನನ್ನು ಕೆಡಿಪಿ ಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಿರುವ ಶಾಸಕ ವಿಜಯಾನಂದ ಕಾಶಪ್ಪನವರಿಗೆ ನನ್ನ ವೈಯಕ್ತಿಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಅವರು ಆಯ್ಕೆ ಮಾಡಿರುವ ಸ್ಥಾನಕ್ಕೆ ಗೌರವ ತರುವ ಕಾರ್ಯವನ್ನು ಮಾಡಲಾಗುವುದು ಎಂದರು. ನೂತನ ಕೆಡಿಪಿ ಸದಸ್ಯರಿಗೆ ಎಸ್.ಸಿ ಸಮುದಾಯದ ಎಲ್ಲಾ ಮುಖಂಡರು, ಯುವ ಮಿತ್ರರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ. ಎಂ.ಬಂಡರಗಲ್ಲ.ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button