ದೇವರ ಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಮೊಹರಂ ಪ್ರಯುಕ್ತ ಜರುಗಿದ ಶಾಂತಿ ಸಭೆ.
ದೇವರ ಹಿಪ್ಪರಗಿ ಜು.12

ಮೊಹರಂ ಹಬ್ಬದಲ್ಲಿ ಯಾವುದೇ ಕಾನೂನು ಬಾಹಿರ, ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಹಬ್ಬ ಆಚರಿಸುವಂತೆ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಸಲಹೆ ನೀಡಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು. ಮೊಹರಂ ಸಮಾಜದಲ್ಲಿ ವಿಶಿಷ್ಟ ಹಬ್ಬ . ಹಿಂದೂ-ಮುಸ್ಲಿಂ ಎಂಬ ಭೇದ ಭಾವಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಆಚರಿಸುವ ಸಂಭ್ರಮದ ಹಬ್ಬವಾಗಿದೆ. ಹೀಗಾಗಿ ಈ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಮೆರುಗು ಬರುವಂತೆ ಮಾಡಬೇಕು ವಿನಃ ಸಮಾಜಕ್ಕೆ ಕೆಡಕು ಉಂಟು ಮಾಡುವಂತಹ ಘಟನೆಗಳನ್ನು ಮಾಡಬಾರದು ಎಂದು ಹೇಳಿದರು.

ಸಂದರ್ಭದಲ್ಲಿ ಮುಸ್ಲಿಂ ಕಮಿಟಿಯ ಅಧ್ಯಕ್ಷರಾದ ಮೈಹಿಬೂಬ ಹುಂಡೇಕಾರ, ವಿನೋದಗೌಡ ಪಾಟೀಲ, ಪ್ರಕಾಶ ಗುಡಿಮನಿ, ಶ್ರೀಧರ ನಾಡಗೌಡ ಮಾತನಾಡಿ, ಪಟ್ಟಣ ಶಾಂತಿಗೆ ಹೆಸರಾಗಿದೆ, ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತ. ಹಿಂದೂ-ಮುಸ್ಲಿಂ ಸೇರಿ ಎಲ್ಲಾ ಜನಾಂಗದವರು ಒಟ್ಟುಗೂಡಿ ಆಚರಿಸಿ ಕೊಂಡ ಬಂದ ಹಿನ್ನೆಲೆ ಇದೆ ನಾವೆಲ್ಲರೂ ಇಲಾಖೆಗೆ ಸಹಕಾರ ನೀಡಿ ಹಬ್ಬ ಆಚರಿಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರುಗಳಾದ ಬಸೀರ ಅಹ್ಮದ್ ಬೇಪಾರಿ, ಕಾಸಪ್ಪ ಭಜಂತ್ರಿ ಮುಖಂಡರುಗಳಾದ ಮಲ್ಲನಗೌಡ ಪಾಟೀಲ, ಹುಸೇನ್ ಗೌಂಡಿ, ಸುನೀಲ ಕನಮಡಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ.